Anant Vaidya

Anant Vaidya

Thursday, May 25, 2017

#ಕೇಳಿದ್ದು

ಆಸೆ ಕಮರಿ ಹೋಗುವುದಿಲ್ಲ! ನಾವೇ ಕಮರಿ ಹೋಗುತ್ತೇವೆ!!
ತೃಷ್ಣಾ ನ ಜೀರ್ಣಾ
ವಯಮೇವ ಜೀರ್ಣಾಃ
ಸಪ್ಪೆ ಮೆಲುವಾಗ ಸೊಪ್ಪಿನ ಚಿಂತೆ |
ಸೊಪ್ಪು ದೊರಕಿದರೆ ಉಪ್ಪು ಬರಲಿಲ್ಲವೆಂಬ ಚಿಂತೆ ||
ಉಪ್ಪು ದೊರಕಿದರೆ ತುಪ್ಪ ಬರಲಿಲ್ಲವೆಂಬ ಚಿಂತೆ |
ತುಪ್ಪವೇ ದೊರಕಿದರೆ ಕೊಪ್ಪರಿಗೆ ಸಿಗದೆಂಬ ಚಿಂತೆ ||
ವಿಜಯದಾಸರ ಸುಳಾದಿ
#ಕೇಳಿದ್ದು

Wednesday, May 24, 2017

ಪ್ರಾಚೀನ ಜ್ಞಾನ

ನಂ-1 ಪತ್ರಿಕೆ "ವಿಜಯವಾಣಿಗೆ ಕೃತಜ್ಞತೆ ಸಲ್ಲಿಸಿ,

ಹಾರುವ ತಟ್ಟೆ ಹಿಂದಿತ್ತೇ?

ಕಾಶ್ಯಪ ಮತ್ತು ದಿತಿಯರಿಗೆ ಜನಿಸಿದವನೇ ‘ವಜ್ರಾಂಗ’. ದಿತಿಯ ಮಕ್ಕಳೆಲ್ಲರೂ ವಿಷ್ಣುವಿನಿಂದ ಮತ್ತು ಇಂದ್ರನಿಂದ ಹತರಾದರು. ಇವರು ಅದಿತಿಯ ಮಕ್ಕಳು. ಕಾಶ್ಯಪನ ಕುಟುಂಬವೇ ಜಗದ್ವ್ಯಾಪಿಯಾಗಿ ಹರಡಿತ್ತು. ಆದರೆ ಸಹೋದರರ ಕದನದಿಂದಾಗಿ ಅವನ ಕುಟುಂಬದಲ್ಲಿ ಎಲ್ಲವೂ ಸರಿಯಾಗಿದ್ದಿರಲಿಲ್ಲ. ಒಂದು ತಾಯಿಯ ಮಕ್ಕಳೇ ಸರಿಯಿರುವುದಿಲ್ಲ! ಇನ್ನು ಹದಿಮೂರು ತಾಯಂದಿರ ಮಕ್ಕಳು ಹೇಗೆ ಸರಿಯಿದ್ದಾರು?

ವಜ್ರಾಂಗನು ತಾಯಿ ದಿತಿಯ ಗರ್ಭದಲ್ಲಿರುವ ಶಿಶುವನ್ನು ನಲ್ವತ್ತೊಂಬತ್ತು ಭಾಗಗಳನ್ನಾಗಿ ಕತ್ತರಿಸಿದ. ಈ ಮರುತ್ತುಗಳ ತಮ್ಮನೇ ವಜ್ರಾಂಗ! ಇಂದ್ರ ಮಾಡಿದ ಶಿಶುಹತ್ಯೆಯನ್ನು ತಾಯಿ ದಿತಿಯಿಂದ ಕೇಳಿದ ವಜ್ರಾಂಗನು ಇಂದ್ರನನ್ನು ತಾಯಿಯ ಬಳಿಗೆ ಎಳೆದುಕೊಂಡು ಬಂದ! ಅಷ್ಟರಲ್ಲಿ ಕಶ್ಯಪನು ಮತ್ತು ಬ್ರಹ್ಮನು ಬಂದು ಇಂದ್ರನನ್ನು ಬಿಡಿಸಿದರು. ಬಳಿಕ ಬ್ರಹ್ಮನು ವರಾಂಗಿಯೆಂಬ ತರುಣಿಯನ್ನು ಸೃಷ್ಟಿಸಿ, ವಜ್ರಾಂಗನಿಗೆ ಕೊಟ್ಟು ಮದುವೆ ಮಾಡಿದನು. ವಜ್ರಾಂಗನು ತನ್ನ ರಾಕ್ಷಸತ್ವ ನಿವಾರಣೆಗಾಗಿ ಬ್ರಹ್ಮನ ಕುರಿತು ತಪಸ್ಸು ಮಾಡುತ್ತಿದ್ದ!! ವರಾಂಗಿ ಬ್ರಹ್ಮನ ಮಗಳು! ಆದರೂ ಇಂದ್ರನು ಅವಳನ್ನು ನಾ-ನಾ ಪರಿಯಿಂದ ಪೀಡಿಸಿದ.
ವಜ್ರಾಂಗ ಬಹಿರ್ಮಖನಾಗಿ ನೋಡುವಾಗ ವರಾಂಗಿಯು ಎಲ್ಲಿಯೋ ಒಂದು ಪರ್ವತದ ಗವಿಯಲ್ಲಿ ವಿಕೃತೆಯಾಗಿದ್ದಳು. ಅವಳಿಂದ ಸಮಾಚಾರವನ್ನು ತಿಳಿದು ಮರಳಿ ತಪಸ್ಸನ್ನು ಮಾಡಿ ದೇವತೆಗಳನ್ನು ಸದೆಬಡಿಯುವ ಸಾಮರ್ಥ್ಯವುಳ್ಳ ಮಗನನ್ನು ಪಡೆದ. ಅವನೇ ತಾರಕಾಸುರ! [ಮತ್ಸ್ಯಪುರಾಣ-146]

ತಾರಾಕ್ಷ, ಕಮಲಾಕ್ಷ, ವಿದ್ಯುನ್ಮಾಲಿ ಎಂಬ ಮೂವರು ಮಕ್ಕಳು ತಾರಕಾಸುರನಿಗೆ ಜನಿಸಿದರು. ತಾರಕಾಸುರನು ವಧಿಸಲು ಸ್ಕಂದನು ಕಾರಣೀಭೂತನಾದ. ಆ ಯುದ್ಧವನ್ನು ‘ತಾರಕಾಮಯ’ ಸಂಗ್ರಾಮವೆಂದೇ ಕರೆಯುವರು.
ವ್ಯಾಖ್ಯಾನಕಾರರ ವಿವರಣೆ ಹೀಗೆದೆ : “ತಾರಕಾಮಯಃ ತಾರಕಾಸುರ ಏವ ಆಮಯಃ” “ತಾರಕಾಸುರನೇ ಒಂದು ರೋಗ”. ಆ ರೋಗವನ್ನು ಬುಡಪಾಯದಿಂದ ತೆಗೆದು ಹಾಕಿದವ ‘ಮುರುಗನ್’.

ತಾರಾಕ್ಷ, ಕಮಲಾಕ್ಷ, ವಿದ್ಯುನ್ಮಾಲಿ ಈ ಮೂವರೂ ಬ್ರಹ್ಮನ ಕುರಿತು ಘೋರವಾದ ತಪಸ್ಸನ್ನು ಮಾಡಿದರು. ಇವರ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷವಾದ. ‘ಬೇಕಾದ ವರವನ್ನು ಪಡೆಯಲು’ ಆಜ್ಞಾಪಿಸಿದ. ಇವರು ಅಮರತ್ವವನ್ನು ಕೇಳಿದರು. ‘ಅಮರತ್ವವನ್ನು ನೀಡಲು ಸಾಧ್ಯವಿಲ್ಲ. ಬೇರೆ ಯಾವುದಾದರೂ ವರವನ್ನು ಕೇಳಿ’ ಎಂದು ಬ್ರಹ್ಮನು ಹೇಳಿದನು. ಅವರು “ನಾವು ಮೂವರು ಈ ಲೋಕದಲ್ಲಿ ಮೂರು ಪಟ್ಟಣಗಳನ್ನು ನಿರ್ಮಿಸಿಕೊಂಡು ಅಲ್ಲಿಯೇ ಇದ್ದಕೊಂಡು ನಿನ್ನ ಕೃಪಾಪ್ರಸಾದದಿಂದ ಈ ಪೃಥ್ವಿಯನ್ನು ಸಂಚರಿಸುತ್ತಿರುತ್ತೇವೆ. ಒಂದು ಸಾವಿರ ವರ್ಷಗಳನಂತರ ನಾವು ಮೂವರು ಒಟ್ಟಾಗಿ ಸೇರುತ್ತೇವೆ. ನಮ್ಮ ತ್ರಿಪುರಗಳು ಆ ಸಂದರ್ಭದಲ್ಲಿ ಏಕೀಭಾವವನ್ನು ಹೊಂದುತ್ತವೆ. ಏಕೀಭಾವವನ್ನು ಹೊಂದಿದ ತ್ರಿಪುರಗಳನ್ನು ಆ ಸಮಯದಲ್ಲಿ ಯಾವ ದೇವ ಶ್ರೇಷ್ಠನು ಒಂದೇ ಬಾಣದಿಂದ ಭಗ್ನಗೊಳಿಸುತ್ತಾನೆಯೋ ಅವನೇ ನಮ್ಮ ಮೃತ್ಯುವಾಗುತ್ತಾನೆ. ‘ಹಾಗೆಯೇ ಆಗಲಿ’ ಎಂದು ಬ್ರಹ್ಮ ಹೇಳಿದ.

ಬ್ರಹ್ಮನಿಂದ ತಾವು ಅಪೇಕ್ಷಿಸಿದ ವರವನ್ನು ಪಡೆದು ಸುಪ್ರೀತರಾದರು. ಆ ಅಸುರರು ಪರಸ್ಪರವಾಗಿ ಸಮಾಲೋಚಿಸಿದರು. ತಮಗೆ ಅನುಕೂಲಕರವಾದ ಮೂರು ಪುರಗಳನ್ನು ನಿರ್ಮಿಸುವುದರ ಸಲುವಾಗಿ ದೈತ್ಯ – ದಾನವ ಪೂಜಿತನಾದ, ಮುಪ್ಪಿನಿಂದ ಪೂಜಿತನಾಗಿದ್ದ, ಮಹಾಸುರನಾದ, ದೇವಶಿಲ್ಪಿಯಾದ ವಿಶ್ವಕರ್ಮನಿಗೆ ಸಮಾನನಾದ ಮಯನನ್ನು ಆಮಂತ್ರಸಿದರು. ಧೀಮಂತನಾದ ಮಯನು ತನ್ನ ತಪಃಶ್ಯಕ್ತಿಯಿಂದ ಒಂದು ಚಿನ್ನದ ಪುರವನ್ನು, ಒಂದು ಬೆಳ್ಳಿಯ ಪುರವನ್ನು, ಮತ್ತು ಒಂದು ಕಬ್ಬಿಣದ ಪುರವನ್ನು ನಿರ್ಮಿಸಿಕೊಟ್ಟನು.

ಕಾಂಞ್ಚನಂ ದಿವಿ ತತ್ರಾಸೀದನ್ತರಿಕ್ಷೇ ಚ ರಜತಮ್ |
ಆಯಸಂ ಚಾಭವದ್ಭೌಮಂ ಚಕ್ರಸ್ಥಂ ಪೃಥಿವೀಪತೇ || [ವ್ಯಾ. ಭಾರತ. ಕರ್ಣಪರ್ವ – 33-18]
ಸುವರ್ಣದಿಂದ ನಿರ್ಮಿತವಾಗಿದ್ದ ಪುರವು ಸ್ವರ್ಗಲೋಕದಲ್ಲಿದ್ದಿತು. ಬೆಳ್ಳಿಯಿಂದ ನಿರ್ಮಿತವಾಗಿದ್ದ ಪುರವು ಅಂತರಿಕ್ಷದಲ್ಲಿದ್ದಿತು. ಲೋಹದಿಂದ ನಿರ್ಮಿತವಾಗಿದ್ದ ಪುರವು ಸುತ್ತುತ್ತಿರುವ ಚಕ್ರದ ಮಧ್ಯದಲ್ಲಿ ಭೂಮಿಯಲ್ಲಿದ್ದಿತು.

ಸ್ವರ್ಗಲೋಕದಲ್ಲಿರುವ ಸುವರ್ಣಮಯವಾದ ವಿಚಿತ್ರವಾದ ಪಟ್ಟಣವು ಮಹಾತ್ಮನಾದ ತಾರಾಕ್ಷನದಾಗಿತ್ತು. ಬೆಳ್ಳಿಯ ಪಟ್ಟಣವು ಕಮಲಾಕ್ಷನಿಗೆ ಸೇರಿತ್ತು. ಭೂಮಿಯಲ್ಲಿದ್ದ ಲೋಹದ ಪುರವು ವಿದ್ಯನ್ಮಾಲಿಗೆ ಸೇರಿತ್ತು! ತಮ್ಮ ಪಟ್ಟಣದ ಪ್ರಭಾವ ಹಾಗೂ ವಿವಿಧ ಶಸ್ತ್ರಾಸ್ತ್ರಗಳಿಂದ ದರ್ಪಿಷ್ಠರಾಗಿ ಮೂರು ಲೋಕಗಳಲ್ಲಿಯೂ ತಮ್ಮ ಆಧಿಪತ್ಯವನ್ನು ಸ್ಥಾಪಿಸಿದರಲ್ಲದೇ ತಮಗೆ ವರವನ್ನು ನೀಡಿದ ಬ್ರಹ್ಮನನ್ನೇ “ಆ ಪ್ರಜಾಪತಿ ಎಂಬವನು ಯಾರು?” ಎಂದೆನ್ನುತ್ತಾ ತಾತ್ಸಾರದಿಂದ ಕಾಣತೊಡಗಿದರು.
ತ್ರಿಪುರಗಳಲ್ಲಿ ಆಶ್ರಯಪಡೆದಿದ್ದ ದೈತ್ಯರು ಯಾವ-ಯಾವುದು ಬೇಕೆಂದು ಆಸೆಪಡುತ್ತಿದ್ದರೋ ಆ ಎಲ್ಲ ಕಾಮನಾವಸ್ತುಗಳನ್ನು ಮಯಾಸುರನು ತಕ್ಷಣ ಸಿದ್ಧಮಾಡಿಕೊಡುತ್ತಿದ್ದನು.

ಗಮನಿಸಿ: ವಿಶ್ವಕರ್ಮನಿರ್ಮಿತ ಸುವರ್ಣಪುರ, ಬೆಳ್ಳಿಯಪುರ, ಕಬ್ಬಿಣದಪುರ ಹಾರುತಟ್ಟೆಯೇ? ಇವು ಎಲ್ಲಿಂದ ಎಲ್ಲಿಗೆ ಬೇಕಾದರೂ ಚಲಿಸುತ್ತಿದ್ದವೇ? ಒಂದು ಸ್ವರ್ಗಲೋಕದಲ್ಲಿ, ಇನ್ನೊಂದು ಅಂತರಿಕ್ಷದಲ್ಲಿ, ಮತ್ತೊಂದು ಭೂಲೋಕದಲ್ಲಿ ‘ಸುತ್ತುತ್ತಿರುವ ಚಕ್ರದ ಮಧ್ಯದಲ್ಲಿ ಭೂಮಿಯಲ್ಲಿದ್ದಿತ್ತೇ! ಚಕ್ರ ಚಲನ ಶೀಲತೆಯ ಸಂಕೇತ. ಅದೇ ಈ ಪಟ್ಟಣಗಳಲ್ಲಿಯೂ ಕಂಡುಬರುವುದು. ಒಂದು ಸಾವಿರ ವರ್ಷಕ್ಕೊಮ್ಮೆ ಒಂದೇ ಸರಳರೇಷೆಯಲ್ಲಿ ಇದ್ದು ಏಕೀ ಭಾವವನ್ನು ಹೊಂದುತ್ತದೆ. ಆಗ ಇದನ್ನು ಶಕ್ತಿಶಾಲಿಯೊಬ್ಬ ನಾಶ ಪಡಿಸಬಲ್ಲ! ಗುರುತ್ವಾಕರ್ಷಣೆಯ ಸಿದ್ಧಾಂತ ಇಲ್ಲಿ ಎದ್ದು ಕಾಣುವುದು. ವಿನಾಶದ ಸೂತ್ರವೂ ಸ್ಪಷ್ಟವಾಗಿಯೇ ಇದೆ.
ಕಾಶ್ಯಪನಿಗೆ ಏಕೆ ತನ್ನ ಮಕ್ಕಳಲ್ಲಿಯೇ ಬೇಧ? ಅವನೇಕೆ ದಿತಿಯ ಮಕ್ಕಳನ್ನು ರಕ್ಷಿಸಲು ಹೋದ? ನಾ-ನಾ ಪ್ರಶ್ನರಗಳು ನಮ್ಮನ್ನು ಕಾಡುವುದು.

ಪ್ರಾಚೀನ ಜ್ಞಾನ


Saturday, May 20, 2017

ಪ್ರಾಚೀನಜ್ಞಾನ

ನಂ-1 ಪತ್ರಿಕೆ ವಿಜಯವಾಣಿಗೆ ಕೃತಜ್ಞತೆ ಸಲ್ಲಿಸಿ.

ಗರುಡ ಹನುಮರ ಹಾರಾಡುವ ಶಕ್ತಿಯ ಹಿನ್ನೆಲೆ ಯೇನು?

ವಿಷ್ಣು ದೇವತೆಗಳಲ್ಲಿಯೇ ಮಹಾಬುದ್ಧಿವಂತ! ಶಾಂತಾಕಾರ. ಪಾಲ್ಗಡಲಲ್ಲಿ ಶೇಷಶಯನಿ. ಪದ್ಮನಾಭ. ಪದ್ಮಾಕ್ಷ. ವಿಶ್ವಾಕಾರ. ಅನಂತತೆಯ ಸಂಕೇತವಾದ ಆಕಾಶವರ್ಣಿ. ಸೌಂದರ್ಯಮಯಿ. ಯೋಗಿಗಳ ಹೃದಯದ ಉದ್ಯಾನದ ಕ್ರೀಡಾರೂಪಿ, ರಸಿಕ. ಲಕ್ಷ್ಮೀಲೋಲ. ಸುದರ್ಷನ ಚಕ್ರ, ಕೌಮೋದಕೀ ಗದೆ, ಪದ್ಮ, ಶಂಖಗಳು ಇವನ ಆಯುಧಗಳು! ಶುಭ್ರವಾದ ಪೀತಾಂಬರ, ಕೊರಳಲ್ಲಿ ತುಳಸಿಹಾರ, ಶ್ರೀವತ್ಸ ಲಾಂಛನ, ತನಗೆ ಬೇಕಾದುದನ್ನೆಲ್ಲ ಪಡೆದು ಕೊಳ್ಳುವ ಚಾಕಚಕ್ಯತೆ, ಭೂಭಾರವನ್ನು ಕಡಿಮೆ ಮಾಡುವ ಹೊಣೆಯನ್ನು ಹೊತ್ತವ. ಹತ್ತು ಅವತಾರಗಳನ್ನು ಎತ್ತಿ ದುಷ್ಟಶಿಕ್ಷಣೆ, ಶಿಷ್ಟಪರಿಪಾಲನೆಯನ್ನು ಮಾಡಿದವ! ವಿಷ್ಣುವು ಸರ್ವವ್ಯಾಪಿ. ಆ ಸರ್ವವ್ಯಾಪಿ ಭಗವಂತನ ಅನಂತ, ಅಮೋಘ, ಅಚಿಂತ್ಯ, ಅನಾದಿ, ಅಗಮ್ಯ, ಅಗಾಧ ಶಕ್ತಿ, ವೈಭವಗಳ ಅಭೂತಪೂರ್ವ ವರ್ಣನೆಯೇ ವಿಷ್ಣು ಪುರಾಣ. ಇದರಲ್ಲಿ ಭಗವಂತ ಹಾಗೂ ಭಕ್ತನ ಅವಿನಾಭಾವ ಸಂಬಂಧ, ಲೋಕಾನುಗ್ರಹಕಾರಕ ಶಕ್ತಿಯ ವಿವರವಿದೆ.
ಇವನೇನಾದರೂ ವಿಮಾನದ ಕುರಿತು ಆಲೋಚಿಸಿದ್ದನೇ?
ಹಕ್ಕಿಯೇ ವಿಮಾನಕ್ಕೆ ಪ್ರೇರಣೆ. ವಿಮಾನವೂ ಹಕ್ಕಿಯನ್ನೇ ಹೋಲುವುದು. ವಿಷ್ಣುವಿನ ವಾಹನವೂ ಪಕ್ಷಿಯೇ! ‘ಗರುಡ ಗಮನ’ ಎಂದೇ ಎಲ್ಲರೂ ಹೇಳುವುದು. ಗರುಡ ಮನೋವೇಗವನ್ನು, ಬುದ್ಧಿವೇಗವನ್ನು, ಬೆಳಕಿನ ವೇಗವನ್ನು, ಶರವೇಗವನ್ನು ಹೊಂದಿರುವುದು. ಭಾರತೀಯ ತತ್ತ್ವಜ್ಞಾನದಲ್ಲಿ ಪ್ರಾಣವನ್ನು ‘ಪ್ರಾಣಪಕ್ಷಿ’ ಎಂದೇ ಗುರುತಿಸುವರು. ಓದುಗ ದೇವರಿಗೆ ಒಂದು ಕಥೆಯನ್ನು ಜ್ಞಾಪಿಸಬಹುದು. ಒಂದು ರಾಕ್ಷಸ ಏಳು ಸಮುದ್ರಗಳ ಆಚೆ ಒಂದು ಗಿಣಿಯಲ್ಲಿ ತನ್ನ ‘ಜೀವಪಕ್ಷಿ’ಯನ್ನು ಇಟ್ಟಿದ್ದ! ರಾಜಕುಮಾರ ಏಳುಸಮುದ್ರವನ್ನು ದಾಟಿ ಆ ಗಿಣಿಯ ಕುತ್ತಿಗೆಯನ್ನು ತಿರುಚಿ ಪ್ರಾಣಹರಣ ಮಾಡಿದ. ಪ್ರಾಣಪಕ್ಷಿಯು ಹಾರಿಹೋದ ಮೇಲೆ ಇರುವುದು ಯಾರಿಗೂ ಬೇಡವಾದ ದೇಹಮಾತ್ರ! ದೇಹದ ಸಂಸ್ಕಾರದ ಅಂಗಗಳಲ್ಲಿ ‘ಗರುಡ + ಪುರಾಣ’ ಓದುವ ಅಭ್ಯಾಸವಿದೆ. ಅಂದರೆ ಪ್ರಾಣಪಕ್ಷಿಯ ಪ್ರಯಾಣ! ಹಲವು ದೇವತೆಗಳ ವಾಹನವು ಪಕ್ಷಿಯೇ ಆಗಿದ್ದರೂ ಗರುಡನಷ್ಟು ಪ್ರಭಾವ ಶಾಲಿಯಲ್ಲ.

ಸರಸ್ವತಿ ಮತ್ತು ಷಣ್ಮಖರ ವಾಹನವಾದ ‘ನವಿಲು ರಾಷ್ರೀಯ ಪಕ್ಷಿ’. ‘ಹಂಸಧ್ಯಾನ’ ಎಂದರೆ ’ಶ್ವಾಸಧ್ಯಾಸ’ ... ಎಂದರೆ ಶ್ವಾಸದ ಮೇಲೆ ಗಮನ. ಹಂಸ ಬ್ರಹ್ಮಜ್ಞಾನದ ಸಂಕೇತ. ಹಂಸ ಧ್ಯಾನವೇ ’ಪರಮಹಂಸ’ತ್ವವನ್ನು ನೀಡುವುದು. ಹಂಸದ ಇನ್ನೊಂದು ಗುಣ, ನೀರನ್ನು ತ್ಯಜಿಸಿ ಹಾಲನ್ನು ಸ್ವೀಕರಿಸುವುದು. ಹಂಸಪಕ್ಷಿ ಶರಣಾಗತಿಯ ಸಂಕೇತ. The swan is a symbol of peace and tranquility. ಶಾಂತಿ ಮತ್ತು ದ್ವಂದ್ವನಿವಾರಣೆ. ನಳ-ದಮಯಂತಿಯರ ಗುಣ ವರ್ಣನೆ… ಹಂಸಸಂದೇಶ. [ವನಪರ್ವ-53] ಸಂ.4

ಪಾರಿವಾಳವು ಬಹಳ ಮಹತ್ವವಾದುದು. ಪಾರಿವಾಳ ಅತ್ಯಂತ ಜಾಣಪಕ್ಷಿ. Doves are symbols of love, Peace or as messanger. ಪಾರಿವಾಳವು ಪ್ರೇಮ, ಶಾಂತಿ ಮತ್ತು ವಾರ್ತಾವಾಹಕದ ಸಂಕೇತ. “ಶಾಂತಿ ಸಂಕೇತ” ಎಂದು ಭಾವಿಸಲಾದ ಪಕ್ಷಿ [ಕನ್ನಡ ರತ್ನಕೋಶ. ಶಿವರಾಮ ಕಾರಂತ]
ಪಾರಿವಾಳದ ಕುರಿತು ಅನೇಕ ಕಥೆಗಳಿವೆ. ಪಾರಿವಾಳವನ್ನು ರಕ್ಷಿಸುವುದಕ್ಕಾಗಿ ಶಿಬಿಯು ತನ್ನ ತೊಡೆಯ ಮಾಂಸವನ್ನು ಕತ್ತರಿಸಿ ಕೊಟ್ಟನು. [ವನಪರ್ವ-131 ಸಂಪುಟ-5] ಪಾರಿವಾಳವನ್ನು ಬೇಹುಗಾರಿಕೆಗೂ ಬಳಸುವರು! ಗುಜರಾತಿನ ಸಲಾಯ ಎಸ್ಸಾರ ಬಂದರಿನಲ್ಲಿ ಕಾಲಿನಲ್ಲಿ ಎಲೊಕ್ಟ್ರೋನಿಕ್ ಚಿಪ್ ಇರುವ, ಅರೇಬಿಕ್ ಭಾಷೆಯಲ್ಲಿ ಸಂದೇಶ ಇರುವ ಪಾರಿವಾಳವು ಕಂಡು ನಾ-ನಾ ಊಹೆಗಳಿಗೆ ಕಾರಣವಾದುದು ನಂ-1 ಪತ್ರಿಕೆ ವಿಜಯವಾಣಿಯು 29-3-2014ರಂದು ವರದಿಮಾಡಿತ್ತು. ಯುನಾಟೆಡ್ ಕಿಂಗ್ಡಮ್ನಲ್ಲಿ 1 ಎಪ್ರಿಲ್ ಒಂದು 1918ರಲ್ಲಿ [98 ವರ್ಷ] ಸ್ಥಾಪಿತವಾದ ರೊಯಲ್ ಎರ್ ಫೋರ್ಸನ ಚಿಹ್ನೆ “ಪಾರಿವಾಳ”

ಆದರೆ ಗರುಡನವೇಗ ಮತ್ತು ಗಮನ ಎಲ್ಲ ಪಕ್ಷಿಗಳಿಂಗಿಂತಲೂ ಪ್ರಧಾನವಾದುದು. ಗರುಡಕ್ಕೆ ಹಾವೇ ಆಹಾರ. ಇಂಧನ! ವಿಷವೇ ಅದರ ಹಾರಾಟದ ಮೂಲ. ಗರುಡನಿಗೆ ರೆಕ್ಕೆ ಇದ್ದರೆ ಶ್ರೀರಾಮನ ಪರಮಭಕ್ತ ಹನುಮಂತನಿಗೆ ರೆಕ್ಕೆಯ ಬದಲು ಬಾಲವಿದೆ. ಇವನ ವಾಯುಸಂಚಾರದ ಚಲನೆಗೆ ಬಾಲವೇ ಕಾರಣ. ಬಾಲವೇ ನಿಯಂತ್ರಕ. ತನ್ನ ಬಾಲದ ಬಲದಿಂದಲೇ ಸೂರ್ಯನನ್ನು ನುಂಗಲು ಹೋದವ. ಸೂರ್ಯಗೋಲದ ಭಯವಿಲ್ಲದೆಯೇ, ಸುಟ್ಟು ಹೋಗದೇ ಇರುವವ. ಶ್ರೀರಾಮ-ಲಕ್ಷ್ಮಣರನ್ನು ಋಷ್ಯಮೂಕಕ್ಕೆ, ರಾಮಸೇತುವನ್ನು ದಾಟಬೇಕಾದರೆ ಹೆಗಲಿನ ಮೇಲೆ ಹೊತ್ತು ಸಾಗಿದವ. ರಾವಣನ ಮುಂದೆ ತನ್ನ ಬಾಲದ ಮೇಲೇ ಕುಳಿತವ. ಹಿಮಾಲಯದಿಂದ ಸಂಜೀವಿನಿ ಬೆಟ್ಟವನ್ನು ಎತ್ತಿಕೊಂಡು ಬಂದವ.

ಹನುಮಂತನ ಚಲನೆಗೆ ಸೂರ್ಯಪ್ರಕಾಶವೇ ಕಾರಣವಾಗಿತ್ತು. ಭಾರತೀಯರು ಈ ಹಿಂದೆಯೇ ಸೋಲಾರ ಪ್ರಕಾಶ, ಸೂರ್ಯಶಕ್ತಿಯನ್ನು ಕಂಡು ಕೊಂಡಿದ್ದರೇ! ಅದಕ್ಕೇ ಯೋಗದಲ್ಲಿ ಸೂರ್ಯನಮಸ್ಕಾರ, ಮಂತ್ರದಲ್ಲಿ ಗಾಯತ್ರಿ ಪ್ರಚಲಿತವಾಯಿತೇ? ಈಗಲೂ ಸೂರ್ಯಶಕ್ತಿಯಿಂದ ವಿಮಾನವನ್ನು ಚಲಾಯಿಸುವ ಸಂಶೋಧನೆ ಶರವೇಗದಿಂದ ನಡೆಯುತ್ತಿದೆ. 3 ಡಿಸೆಂಬರ್ 2009ರಂದು ಪ್ರಥಮ ಪ್ರಯೋಗ ನಡೆಯಿತು. ಈ ವಿಮಾನಗಳು ಐವತ್ತು ಕಿಲೋಮೀಟರ್ ಒಂದು ತಾಸಿಗೆ ಚಲಿಸುವುದು. ಸ್ವಿಜರ್ಲೆಂಡ್ನ ಸ್ವಿಸ್ ಇಂಜನೀಯರ್ ಅಂದ್ರೆಬೋರ್ಸಚೆಬೆರ್ಗ್ [Andr’e Borschberg] ಮನಃಶಾಸ್ತ್ರಜ್ಞ ಬೆರ್ಟೆಂಡ್ ಪಿಕ್ಕಾರ್ಡ [Bertrand Piccard] ಸಹಾಯಕ ಸಂಶೋಧಕರೇ ಇದನ್ನು ಚಲಾಯಿಸುತ್ತಿದ್ದರು.
[ಚಿತ್ರದಲ್ಲಿ ಪೂರ್ಣ ಲೇಖನ ಕೊಡಲು ಸಾಧ್ಯವಾಗದಿರುವುದಕ್ಕಾಗಿ,]

Thursday, May 11, 2017

ಪ್ರಾಚೀನಜ್ಞಾನ



ನಂ1 ಪತ್ರಿಕೆ, ವಿಜಯವಾಣಿಯನ್ನು ಕೃತಜ್ಞತೆಯಿಂದ ಸ್ಮರಿಸಿ
ಹಿಂದಿನ ಕಾಲದಲ್ಲಿ ವಿಮಾನವಿತ್ತೇ?
ಭಾರತೀಯ ಚಿಂತಕರಿಗೆ ಬಿಡಲಾಗದ ಕೆಲವು ಹವ್ಯಾಸವಿದೆ. ಅದಕ್ಕೆ ಇನ್ನೊಬ್ಬರ ಆಡಳಿತದಲ್ಲಿ ದಬ್ಬಾಳಿಕೆಗೆ ಕಾರಣವಾದುದೂ ಆಗಿರಬಹುದು. 1] ಎಲ್ಲವನ್ನೂ ಖಂಡಿಸುವುದು. 2] ಎಲ್ಲವೂ ನಮ್ಮಲ್ಲೇ ಇದೆ ಎಂದು ಸಿದ್ಧಿಸುವುದು. 3] ತಟಸ್ಥವಾಗಿರುವುದು. 4] ಇತರರು ಹೊಗಳಿದರೆ ಮಾತ್ರ ನಮ್ಮನ್ನು ನಾವು ಗುರುತಿಸಿ ಕೊಳ್ಳುವುದು.
‘ವೇದವು ಅಪಾರವಾದ ರಹಸ್ಯಗಳ ಸುರಿಮಳೆ’ ಎಂದು ಇಂಗ್ಲೀಷರು ನಮಗೆ ಹೇಳಬೇಕಾಯಿತು. ಉಪನಿಷತ್, ಶ್ರೀಮದ್ ರಾಮಾಯಣ, ಶ್ರೀಮದ್ ಮಹಾಭಾರತ ಮತ್ತು ಅದರಲ್ಲಿ ಅಂತರ್ಗತವಾದ ಭಗವದ್ಗೀತೆ, ಎಲ್ಲವನ್ನೂ ಇಂಗ್ಲೀಷರಿಂದ ಪ್ರಭಾವಿತರಾಗಿ ನಾವು ಕಲಿಯ ಬೇಕಾಯಿತು. ಕಾಳಿದಾಸ ಮಹಾಕವಿ ಎಂದ ಮೇಲೆ ‘ಹೌದು! ಹೌದು!!’ ಎಂದು ಒಪ್ಪಿದವರು ನಾವು. ಬಹುಷ್ಯಃ ಭಾರತದ ಎಲ್ಲ ಭಾಷೆಗಳ ಪ್ರಥಮ ಶಬ್ದಕೋಶವು ಇಂಗ್ಲೀಷರಿಂದಲೇ ರಚಿತವಾಗಿರಬೇಕು. ಕನ್ನಡಕ್ಕಂತೂ ‘ಕಿಟ್ಲ’ ಮಹಾಶಯ ಪ್ರಪ್ರಥಮವಾಗಿ ಶಬ್ದಕೋಶವನ್ನು ನೀಡಿದ. ಜರ್ಮನ್‍ರು ಸಂಸ್ಕೃತ ಭಾಷೆಯ ಪೇಟೇಂಟ್ ಪಡೆದುದು ಭಾರತೀಯರ ದೌರ್ಭಾಗ್ಯ.
‘ವಿಮಾನವನ್ನು ರೈಟ್ ಸಹೋದರರೇ ತಯಾರಿಸಿದರು. ಮೊದಲು ಭಾರತದಲ್ಲಿ ಉಪಯೋಗಿಸಲ್ಪಟ್ಟ ವಿಮಾನಗಳು ಹಾಸ್ಯಾಸ್ಪದ’ ಎಂದು ಟೀಕಿಸುವಲ್ಲಿ ಒಂದು ಬೇರೆಯ ಸಂತೋಷವೇ ನಮಗಿದೆ. ಪರದೇಶಿಗರ ಕಾಲಿಗೆ ಬಡಿದ ಮಣ್ಣು ಚಿನ್ನವಾಗಿ ಕಾಣುವುದು. ನಮ್ಮ ಕಾಲಿಗೆ ಬಡಿದ ಚಿನ್ನವೂ ಹೇಸಿಗೆಯಂತೆ ಕಾಣುವುದು.  ನೋಡುವವನ ದೃಷ್ಟಿಕೋನ. ಏನು ಮಾಡಲೂ ಸಾಧ್ಯವಿಲ್ಲ. ಇನ್ನು ಕೆಲವರಿಗೆ ಎಲ್ಲವೂ ನಮ್ಮಲ್ಲಿಯೇ ಇದೆ ಎನ್ನುವ ಹಟ. ‘ನೀನು ಒಳ್ಳೆಯವನು ಎಂದರೆ, ‘ಛೇ! ನನ್ನಷ್ಟು ಕೆಟ್ಟವನು ಬೇರೊಬ್ಬನಿಲ್ಲ’ ಎಂದು ತಮ್ಮನ್ನು ತಾವೇ ಅಪರೋಕ್ಷವಾಗಿ ಹಳಿದುಕೊಳ್ಳುವರು. ಸಾಹಿತಿಗಳು ಬರೆದ ಸಾಹಿತ್ಯವನ್ನು ತಮ್ಮ ಸಂಘ-ಸಂಸ್ಥೆಗಳಿಗೆ ಉಪಯೋಗಿಸಿ ಕೊಳ್ಳುವವರ ಸಂಖ್ಯೆ ಎಲ್ಲೆಡೆಯೂ ಕಂಡುಬರುವದು. ಎಡ-ಬಲಪಂಥಗಳ ಕದನವಂತೂ ಮುಗಿಯಲಾರದ್ದು.
“Time is relative ಎಂದು Einstein 19 ನೆ ಶತಮಾನದಲ್ಲಿ ಕಂಡುಹುಡುಕಿದ, ಹೀಗೆಂದು ಹೇಳಲಾಗುತ್ತಿದೆ. ಆದರೆ 2 ನೆಯ ಶತಮಾನದ ನಾಗಾರ್ಜುನ ಬುದ್ಧ ಮುನಿ ಕಾಲವು ಸ್ವಭಾವಶೂನ್ಯ ಮತ್ತು ಸಾಪೇಕ್ಕ್ಷ ಭೂತ, ವರ್ತಮಾನ ಮತ್ತು ಭವಿಷ್ಯತ್ ಕಾಲಗಳು ಪರಸ್ಪರ ಸಾಪೇಕ್ಷ ಎಂದು ಸಾಧಿಸಿ ತೋರಿಸಿದ ಮೋದಲ ಭಾರತೀಯ ತತ್ತ್ವಶಾಸ್ತ್ರಜ್ಞ. ವನು ಬರೆದ ಗ್ರಂಥಗಳನ್ವು ಓದಿದರೆ ಗೋತ್ತಾಗುತ್ತದೆಪ್ರೋ. ಉದಯ ಕುಮಾರ ಹಬ್ಬು  ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ.
“೧೯೭೦ರ ದಶಕದಲ್ಲಿ ನಾವು, ‘ವೈಮಾನಿಕಶಾಸ್ತ್ರ’ ಗ್ರಂಥದಲ್ಲಿ ಏನಾದರೂ ಸಾರ ಇದೆಯೇ ಎಂದು ಕಾಣಲು ಬಹಳ ಶ್ರಮಪಟ್ಟೆವು. ನಮ್ಮ ಭೂತಕಾಲವನ್ನು ವೈಭವೀಕರಿಸುತ್ತ ನಾವು ಎಲ್ಲಿಗೆ ಹೋಗುತ್ತಿದ್ದೇವೆಯೋ ನನಗೆ ತಿಳಿಯದು. ಈ ಗ್ರಂಥಕ್ಕಾಗಿ ಶ್ರಮಪಟ್ಟಿದ್ದಕ್ಕೆ ನನಗೆ ಖೇದವಿದೆ. ಕೊನೆಗೂ ಅದಕ್ಕೇನೂ ಅರ್ಥವಿರಲಿಲ್ಲ ಎಂದನಿಸುತ್ತಿದೆ” ಎಂದು ಪ್ರೊ. ಮುಕುಂದ ಅವರು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗೆ ತಿಳಿಸಿರುವುದಾಗಿ ಆ ಪತ್ರಿಕೆ ಪ್ರಕಟಿಸಿದೆ. ನಂಬುವುದಾದರೆ ಎರಡೂ ವಾದಗಳಿಗೂ ಬೆಂಬಲವಿದೆ.
“ಈ ಶತಮಾನದ ಅಚ್ಚರಿಯಲ್ಲಿ ಅತಿದೊಡ್ಡ ರಹಸ್ಯ ಬಯಲಾಗಿದೆ. ನಿಮಗೆ ಗೊತ್ತಿರಬಹುದು ಇತ್ತೀಚೆಗೆ ಅಫ್ಘಾನಿಸ್ತಾನ್‍ದಲ್ಲಿ ಐದು ಸಾವಿರ ವರ್ಷಗಳ ಹಿಂದೆ ಮಹಾಭಾರತ ಯುದ್ಧದ ಕಾಲದಲ್ಲಿ ಉಪಯೋಗ ಮಾಡಿರುವ ಸೌರಶಕ್ತಿಯಿಂದ ಹಾರಾಡುತ್ತಿದ್ದ ಕಂಚಿನ ವಿಮಾನಗಳು ಪತ್ತೆಯಾಗಿದೆ! ಪ್ರಾಚೀನ ಭಾರತದ ಹಿಂದೂ ಬರೆಹಗಾರರಿಗೆ ವೈಮಾನಿಕ ಜ್ಞಾನದ ಅರಿವಿತ್ತು! ಅವರು ವಿಮಾನಗಳನ್ನು ರಚಿಸಿ ಬಳಸುತ್ತಿದ್ದರು. ಶಸ್ತ್ರಾಸ್ತ್ರಗಳನ್ನು ಹೊಂದಿದ ಯುದ್ಧವಿಮಾನಗಳು ಬಳಕೆಯಲ್ಲಿದ್ದವು ಎನ್ನುವಂತಹ ಹೇಳಿಕೆಗಳು, ಕೃತಿಗಳ ಉಲ್ಲೇಖಗಳು, ಪರಾಮರ್ಶೆಗಳು ಆಗಾಗ ಪತ್ರಿಕೆಗಳಲ್ಲಿ ಬರುತ್ತಿವೆ”.

“ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಏರೊನಾಟಿಕಲ್ ಎಂಜಿನಿಯರ್‌ಗಳು ೧೯೭೪ರಲ್ಲೇ ವೈಮಾನಿಕ ಶಾಸ್ತ್ರ” ಗ್ರಂಥವನ್ನು ವಿಶ್ಲೇಷಣೆ ಮಾಡಿದ್ದರು. ‘ಅದು ವೇದಕಾಲದ್ದಲ್ಲ, ಅದರಲ್ಲಿ ವಿವರಿಸಲಾದ ಸಂಗತಿಗಳಲ್ಲಿ ವೈಜ್ಞಾನಿಕ ತಥ್ಯವೂ ಇಲ್ಲ. ಅದೊಂದು ಕಟ್ಟು ಕಥೆ. ಈ ಲೇಖಕನಿಗೆ ವಿಮಾನ ತಂತ್ರಜ್ಞಾನದ ತಿಳುವಳಿಕೆ ಇಲ್ಲ’  ಎಂಬ ತೀರ್ಮಾನಕ್ಕೆ ಬಂದಿದ್ದರು. ಇಂದಿನಿಂದ ೪೦ವರ್ಷಗಳ ಮೊದಲೇ ’ಸೈಂಟಿಫಿಕ್ ಜರ್ನಲ್’ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದನ್ನು ಬರೆದವರು ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ನ ವೈಮಾನಿಕ ಇಂಜಿನಿಯರಿಂಗ್ ಮತ್ತು ಯಾಂತ್ರಿಕ ಇಂಜಿನಿಯರಿಂಗ್ ವಿಭಾಗಗಳ ವಿಜ್ಞಾನಿಗಳು”.

ಆದರೆ ಅಫ್ಘಾನಿಸ್ತಾನ್‍ದಲ್ಲಿ “ಗ್ರೇಟ್ ಡಿಸ್ಕವರಿ” ಸಂದರ್ಭದಲ್ಲಿ ಸೈನಿಕರ ಗುಂಪೊಂದು ಅಫ್ಘಾನಿಸ್ತಾನ್ದ  ಮರುಭೂಮಿಯಲ್ಲಿ ಸ್ಕೌಟ್ ಮಿಶನ್ ಸಂಶೋಧನೆ ಮಾಡಿತ್ತು. ಅಲ್ಲಿ ಒಂದು ಪುರಾತನ ವಿಮಾನದ ಹಾರುವ ಯಂತ್ರ ಮತ್ತು ಪ್ರಾಚೀನ ಭಾರತೀಯ ಸ್ಕ್ರಿಪ್ಟ್ ದೊರಕಿದೆ ಎಂದು ವಿವರ ನೀಡಿದ್ದಾರೆ.
“ಈ ವಿಮಾನ ಹೊರತೆಗೆಯಲು ಹೋಗಿ ಹತ್ತು ಅಮೇರಿಕದ ಸೈನಿಕರು ಸತ್ತಿದ್ದರೆ, ಇತ್ತೀಚೆಗೆ ಇದು ವಿಶ್ವದಲ್ಲಿ ದೊಡ್ಡ ಸುದ್ದಿ ಮಾಡಿ, ಇಡೀ ವಿಶ್ವವೇ ಭಾರತದ ಕಡೆಗೆ ನಿಬ್ಬೆರಗಾಗಿ ನೋಡುವ ಹಾಗೆ ಮಾಡಿದೆ ಸಾವಿರಾರು ವರ್ಷಗಳ ಹಿಂದೆ ಭಾರತದಲ್ಲಿ ವಿಮಾನವು ಹಾರಾಡುತ್ತಾ ಇತ್ತು ಎಂದು ಗ್ರಂಥದಲ್ಲಿ ಓದಿದ್ದು ಗೊತ್ತು. ಅದಕ್ಕೆ ಸಾಕ್ಷಿ ಈಗ ಸಿಕ್ಕಿದೆ. [5-8-2015ರ ವರದಿ.] ಪುರಾತನಕಾಲದಲ್ಲಿ ವಿಮಾನವಿತ್ತೇ?

ಪ್ರಾಚೀನಜ್ಞಾನ


ಹೆಸರಿಗೂ ಪುರಾಣವೇ?

  Kavita Gireesh   "ಹೆಸರಿಗೂ ಪುರಾಣವೇ"        ಪಕ್ಕದ ಮನೆಯಲ್ಲಿ ನಾಮಕರಣ   ನಾಮಕರಣ ಅಂತ ಪಕ್ಕದಮನೆ ನಾರ್ತ್ ಇಂಡಿಯನ್ ಫ್ಯಾಮಿಲಿಯವರು ಬೆ...