ಕೃತಜ್ಞತೆ: ನಂ-1 ಪತಿಕೆಗೆ
ವಿಶ್ರವಸನಿಂದ ಕುಬೇರನ ಜನ್ಮ
ಪುಲಸ್ತ್ಯನ ಮಗನಾದ ಮುನಿಶ್ರೇಷ್ಠನಾದ ವಿಶ್ರವಸನು ತಂದೆಯಂತೆಯೇ ತಪಸ್ಸಿನಲ್ಲಿ ನಿರತನಾದನು. ವಿಶ್ರವಸನ ಸದಾಚಾರ-ಸಚ್ಚಾರಿತ್ರ್ಯಗಳನ್ನು ನೋಡಿ ಮಹಾಮುನಿಯಾದ ಭರದ್ವಾಜನು ಕಡುಚಲುವೆಯಾಗಿದ್ದ ತನ್ನ ಮಗಳು ದೇವಾಂಗನೆಯನ್ನು ವಿಶ್ರವಸನಿಗೆ ಮದುವೆಮಾಡಿಕೊಟ್ಟನು. ಲೋಕದ ಪ್ರಜೆಗಳಿಗೆ ಹಿತವನ್ನುಂಟುಮಾಡುವ ಬುದ್ಧಿಯಿಂದ ಅವಳಲ್ಲಿ ವೀರ್ಯಸಂಪನ್ನನಾದ ಮತ್ತು ಪರಮಾದ್ಭುತನಾದ ಒಬ್ಬ ಪುತ್ರನನ್ನು ಪಡೆದುಕೊಂಡನು. ಮೊಮ್ಮಗನು ಹುಟ್ಟಲು ಪಿತಾಮಹನಾದ ಪುಲಸ್ತ್ಯನಿಗೂ ಆನಂದವಾಯಿತು.
“ವಿಶ್ರವಸನ ಮಗನಾಗಿರುವುದರಿಂದಲೂ ವಿಶ್ರವಸನನ್ನೇ ಹೋಲುತ್ತಿರುವುದರಿಂದಲೂ ಇವನು ವೈಶ್ರವಣನೆಂಬ ಹೆಸರಿನಿಂದಲೇ ಪ್ರಸಿದ್ಧನಾಗುತ್ತಾನೆ” ಎಂದು ವಿಶ್ರವಸುವು ಮಗನಿಗೆ ನಾಮಕರಣಮಾಡಿ ತಪಸ್ಸು ಮಾಡಲು ತಪೋವನಕ್ಕೆ ಹೊರಟುಹೋದನು. ಆಹುತಿಯಿಂದ ಹುತಮಾಡಲ್ಪಟ್ಟ ಮಹಾತೇಜಸ್ಸಿನಿಂದ ಕೂಡಿದ ಯಜ್ಞೇಶ್ವರನಂತೆಯೇ ವೈಶ್ರವಣನು ಅಭಿವೃದ್ಧಿ ಹೊಂದುತ್ತಿದ್ದನು.
ಆಶ್ರಮದಲ್ಲಿ ವಾಸಮಾಡುತ್ತಿದ್ದ ವೈಶ್ರವಣನಿಗೆ ಒಮ್ಮೆ ಜ್ಞಾನೋದಯವಾಯಿತು. ‘ಚರಿಷ್ಯೇ ಪರಮಂ ಧರ್ಮಂ ಧರ್ಮೋ ಹಿ ಪರಮಾ ಗತಿಃ’ ‘ನಾನು ಶ್ರೇಷ್ಠವಾದ ಧರ್ಮಾಚರಣೆಯನ್ನು ಮಾಡುತ್ತೇನೆ. ಏಕೆಂದರೆ ಧರ್ಮವೇ ಪರಮಗತಿಯಾಗಿದೆ’ ಎಂದು ತಪಸ್ಸು ಮಾಡಲು ನಿಶ್ಚಯಿಸಿ, ಕಠೋರ ನಿಯಮಗಳಿಗೆ ಬದ್ಧನಾದನು. ಒಂದು ಸಾವಿರ ವರ್ಷಗಳ ಕಾಲ ಅವನು ನೀರನ್ನು ಮಾತ್ರ ಕುಡಿಯುತ್ತಾ, ಮತ್ತೊಂದು ಸಾವಿರ ವರ್ಷಗಳ ಕಾಲ ಗಾಳಿಯನ್ನೇ ಆಹಾರವನ್ನಾಗಿಸಿ ಕೊಳ್ಳುತ್ತಾ, ಯಾವುದೇ ಆಹಾರವನ್ನೂ ತೆಗೆದುಕೊಳ್ಳದೇ ಒಂದು ಸಾವಿರ ವರ್ಷದವರೆಗೆ ತಪಸ್ಸು ಮಾಡಿದನು. ವೈಶ್ರವಣನ ಆ ಘೋರವಾದ ತಪಸ್ಸಿನಿಂದ ಸುಪ್ರೀತನಾದ ಮಹಾತೇಜಸ್ವಿಯಾದ ಬ್ರಹ್ಮನು ಇಂದ್ರನೇ ಮೊದಲಾದ ದೇವತೆಗಳೊಡನೆ ವೈಶ್ರವಣನ ಆಶ್ರಮದ ಬಳಿಗೆ ಬಂದನು.
ಬ್ರಹ್ಮ: “ವತ್ಸ! ನಿನ್ನ ಈ ಪರಮಾದ್ಭುತವಾದ ತಪಃಕರ್ಮದಿಂದ ನಾನು ಸಂತುಷ್ಟನಾಗಿದ್ದೇನೆ. ನೀನು ವರವನ್ನು ಪಡೆದುಕೊಳ್ಳಲು ಯೋಗ್ಯನಾಗಿರುವೆ. ನಿನಗೆ ಮಂಗಳವಾಗಲಿ; ಯಾವ ವರವು ಬೇಕೆಂಬುದನ್ನು ಹೇಳು”.
ವೈಶ್ರವಣ: ’ಪೂಜ್ಯನೇ! ಲೋಕಗಳನ್ನು ರಕ್ಷಣೆ ಮಾಡಲು ಸಾಧ್ಯವಾಗುವ ಲೋಕಪಾಲ ಪದವಿಯನ್ನು ನಾನು ಬಯಸುವೆನು.
ಬ್ರಹ್ಮ: ನಾನು ನಾಲ್ಕನೆಯ ಲೋಕಪಾಲನನ್ನು ಸೃಷ್ಟಿಸಲು ಉದ್ಯುಕ್ತನಾಗಿದ್ದೆನು. ಈಗ ನಿನ್ನ ಅಭಿಲಾಷೆಯಂತೆ ಯಮ-ಇಂದ್ರ ಮತ್ತು ವರುಣರಂತೆ ನೀನೂ ಒಬ್ಬ ಲೋಕಪಾಲನಾಗು. ಧರ್ಮಜ್ಞನೇ! ನೀನು ಒಳ್ಳೆಯ ಮನಸ್ಸಿನಿಂದ ಈ ಪದವಿಯನ್ನು ಪರಿಗ್ರಹಿಸು. ಅದರ ಜೊತೆಗೆ ನೀನು ಸಮಸ್ತವಾದ ನಿಧಿಗಳಿಗೂ ಸ್ವಾಮಿಯಾಗುವೆ. ಸೂರ್ಯಸದೃಶವಾಗಿರುವ ಆ ಪುಷ್ಪಕವಿಮಾನವನ್ನು ಸಂಚಾರಾರ್ಥವಾಗಿ ಪ್ರತಿಗ್ರಹಿಸು. ದೇವತೆಗಳಿಗೆ ಸಮಾನನಾಗು.
ಪಿತಾಮಹನು ಹೀಗೆ ಹೇಳಿ ದೇವತೆಗಳೊಡನೆ ಆಕಾಶಮಾರ್ಗದಲ್ಲಿ ಸ್ವರ್ಗಕ್ಕೆ ಹೊರಟು ಹೋದನು. ನಂತರ ಧನೇಶನು ತಂದೆಗೆ ಕೈಮುಗಿದುಕೊಂಡು ವಿನೀತನಾಗಿ “ಪೂಜ್ಯನೇ! ಪಿತಾಮಹನಿಂದ ನಾನು ಇಷ್ಟವಾದ ವರಗಳನ್ನು ಪಡೆದುಕೊಂಡಿರುವೆನು. ಆದರೆ ಪ್ರಜಾಪತಿದೇವನು ನನಗೆ ವಾಸಕ್ಕಾಗಿ ನಿವಾಸವನ್ನು ಕಲ್ಪಸಿಕೊಡಲಿಲ್ಲ. ನಾನು ವಾಸಮಾಡಲಿರುವ ಆ ಸ್ಥಾನದಲ್ಲಿ ಪ್ರಾಣಿಗಳಿಗೆ ಯಾವ ವಿಧವಾದ ಪೀಡೆಯೂ ಉಂಟಾಗಬಾರದು. ಅಂತಹ ಸ್ಥಾನವೊಂದನ್ನು ನನಗೆ ಕಲ್ಪಿಸಿಕೊಡು” ಎಂದನು.
ಮಗನ ಅಪೇಕ್ಷೆಯಂತೆಯೇ ಮುನಿಶ್ರೇಷ್ಠನಾದ ವಿಶ್ರವಸನು ‘ಧರ್ಮಜ್ಞನೇ! ನಾನು ಹೇಳುವುದನ್ನು ಲಾಲಿಸು. ದಕ್ಷಿಣ ಸಮುದ್ರದ ಆಚೆಯ ದಡದಲ್ಲಿ ತ್ರಿಕೂಟವೆಂಬ ಪರ್ವತವಿದೆ. ಅದರ ಮೇಲ್ಬಾಗದಲ್ಲಿ ವಿಶಾಲವಾಗಿಯೂ ಇಂದ್ರನ ಅಮರಾವತಿಯಂತೆಯೂ ಇರುವ ಸುಂದರವಾದ ಪಟ್ಟಣವಿದೆ. ವಿಶ್ವಕರ್ಮನಿಂದಲೇ ನಿರ್ಮಿಸಲ್ಪಟ್ಟಿರುವ ಆ ಪಟ್ಟಣಕ್ಕೆ “ಲಂಕಾ” ಎಂದು ಹೆಸರು. ಅಮರಾವತಿಯಂತೆಯೇ ಇರುವ ಆ ಲಂಕಾಪಟ್ಟಣವು ರಾಕ್ಷಸರ ವಾಸಕ್ಕಾಗಿ ನಿರ್ಮಿತವಾಗಿದೆ. ಅದು ಯಂತ್ರ-ಶಸ್ತ್ರಗಳಿಂದ ಸಮಾವೃತವಾಗಿದೆ. ಸುವರ್ಣಮಯವಾದ ಪ್ರಾಕಾರದಿಂದ ಕೂಡಿದೆ. ಲಂಕಾಪಟ್ಟಣದ ಸುತ್ತಲೂ ಕಂದಕಗಳಿವೆ. ನಿನಗೆ ಮಂಗಳವಾಗಲಿ. ನೀನು ಆ ಲಂಕಾಪಟ್ಟಣದಲ್ಲಿ ವಾಸವಾಗಿರು. ಅದರ ಹೆಬ್ಬಾಗಿಲು ಸುವರ್ಣದಿಂದಲೂ, ವೈಡೂರ್ಯಮಣಿಗಳಿಂದಲೂ ಮಾಡಲ್ಪಟ್ಟಿದೆ. ಅತ್ಯಂತ ರಮಣೀಯವಾಗಿದೆ. ವಿಷ್ಣುವಿನ ಭಯದಿಂದ ಪೀಡಿತರಾದ ರಾಕ್ಷಸರು ಆ ಲಂಕಾಪಟ್ಟಣವನ್ನು ಬಿಟ್ಟು ಓಡಿಹೋದರು. ಎಲ್ಲ ರಾಕ್ಷಸರೂ ರಸಾತಲಕ್ಕೆ ಓಡಿಹೋದುದರಿಂದ ಆ ಲಂಕಾಪಟ್ಟಣವೀಗ ಶೂನ್ಯವಾಗಿದೆ. ಈ ಕಾರಣದಿಂದಲೇ ಅಲ್ಲಿ ಯಾವ ರಾಜನೂ ಇಲ್ಲ. ಅಲ್ಲಿ ನೀನು ಸುಖವಾಗಿ ವಾಸಮಾಡಿಕೊಂಡಿರಬಹುದು. ಆದುದರಿಂದ ನೀನೀಗಲೇ ಲಂಕಾಪಟ್ಟಣಕ್ಕೆ ಹೋಗು. ಅಲ್ಲಿ ನಿನಗೆ ಯಾವ ವಿಧವಾದ ಬಾಧೆಯೂ ಉಂಟಾಗುವುದಿಲ್ಲ. ನಿನ್ನ ವಾಸವೂ ಅಲ್ಲಿ ದೋಷರಹಿತವಾಗಿರುತ್ತದೆ’ ಎಂದನು.
ತಂದೆಯ ಅಪ್ಪಣೆಯಂತೆಯೇ ವೈಶ್ರವಣನು ತ್ರಿಕೂಟಪರ್ವತದ ಶಿಖರದಲ್ಲಿದ್ದ ಲಂಕಾಪಟ್ಟಣದಲ್ಲಿ ವಾಸಮಾಡತೊಡಗಿದನು. ಅವನಲ್ಲಿ ವಾಸಮಾಡಲು ಪ್ರಾರಂಭಿಸಿದ ಸ್ವಲ್ಪ ದಿವಸಗಳಲ್ಲಿಯೇ ಅವನ ಧರ್ಮಶಾಸನದ ಪ್ರಭಾವದಿಂದಾಗಿ ಸಾವಿರಾರು ರಾಕ್ಷಸರು ಪರಮಹೃಷ್ಟರಾಗಿ ಪುನಃ ಅಲ್ಲಿಗೆ ಬಂದು ನೆಲೆಸಿದರು. ಧರ್ಮಾತ್ಮನಾದ, ರಾಕ್ಷಸಶ್ರೇಷ್ಠನಾದ, ವಿಶ್ರವಸನ ಮಗನಾದ ವೈಶ್ರವಣನು ಪರಮಪ್ರೀತನಾಗಿ ಸಮುದ್ರವೇ ಕಂದಕದ ರೂಪದಲ್ಲಿದ್ದ ಲಂಕಾಪಟ್ಟಣದಲ್ಲಿ ವಾಸಮಾಡುತ್ತಿದ್ದನು. ಕುಬೇರನು ಆಯಾ ಕಾಲಗಳಲ್ಲಿ ಪುಷ್ಪಕವಿಮಾನದಲ್ಲಿ ಕುಳಿತು ತಂದೆ-ತಾಯಿಗಳ ಬಳಿಗೂ ಹೋಗಿಬರುತ್ತಿದ್ದನು. ದೇವ-ಗಂಧರ್ವರೂ ಕುಬೇರನನ್ನು ಸ್ತೋತ್ರಮಾಡುತ್ತಿದ್ದರು. ಅವನ ಭವ್ಯವಾದ ಅರಮನೆಯು ಅಪ್ಸರೆಯರ ನೃತ್ಯದಿಂದ ಸುಶೋಭಿತವಾಗಿದ್ದಿತು.
ಕುಬೇರನು ‘ರಾಕ್ಷಸಶ್ರೇಷ್ಠ’ ಎನ್ನುವಲ್ಲಿ ತುಂಬಾ ಸ್ವಾರಸ್ಯವಿದೆ. ರಾಕ್ಷಸರ ಲಂಕೆಯ ಜೊತೆ ಪುಷ್ಪಕವಿಮಾನವೂ ಅವನ ಕೈಸೇರಿತು. ಶೂನ್ಯವಾಗಿರುವ ಸ್ಥಳಗಳನ್ನು ಯಾರದಾದರೂ, ಯಾರಿಗಾದರೂ, ಯಾವಾಗಾದರೂ ಕೊಡಬಹುದೇ? ಅದು ಸಾಧುವೇ? ‘ನಿನ್ನ ವಾಸವು ದೋಷಪೂರ್ಣವಾಗುವುದಿಲ್ಲ’ ಎಂದು ಒತ್ತಿ ಹೇಳಬೇಕಿತ್ತೇ? ಇದರ ಹಿನ್ನೆಲೆಯಲ್ಲಿ ದೋಷವಿದೆ ಎನ್ನುವ ಧ್ವನಿ ಉಂಟು!
ವಿಶ್ರವಸನಿಂದ ಕುಬೇರನ ಜನ್ಮ
ಪುಲಸ್ತ್ಯನ ಮಗನಾದ ಮುನಿಶ್ರೇಷ್ಠನಾದ ವಿಶ್ರವಸನು ತಂದೆಯಂತೆಯೇ ತಪಸ್ಸಿನಲ್ಲಿ ನಿರತನಾದನು. ವಿಶ್ರವಸನ ಸದಾಚಾರ-ಸಚ್ಚಾರಿತ್ರ್ಯಗಳನ್ನು ನೋಡಿ ಮಹಾಮುನಿಯಾದ ಭರದ್ವಾಜನು ಕಡುಚಲುವೆಯಾಗಿದ್ದ ತನ್ನ ಮಗಳು ದೇವಾಂಗನೆಯನ್ನು ವಿಶ್ರವಸನಿಗೆ ಮದುವೆಮಾಡಿಕೊಟ್ಟನು. ಲೋಕದ ಪ್ರಜೆಗಳಿಗೆ ಹಿತವನ್ನುಂಟುಮಾಡುವ ಬುದ್ಧಿಯಿಂದ ಅವಳಲ್ಲಿ ವೀರ್ಯಸಂಪನ್ನನಾದ ಮತ್ತು ಪರಮಾದ್ಭುತನಾದ ಒಬ್ಬ ಪುತ್ರನನ್ನು ಪಡೆದುಕೊಂಡನು. ಮೊಮ್ಮಗನು ಹುಟ್ಟಲು ಪಿತಾಮಹನಾದ ಪುಲಸ್ತ್ಯನಿಗೂ ಆನಂದವಾಯಿತು.
“ವಿಶ್ರವಸನ ಮಗನಾಗಿರುವುದರಿಂದಲೂ ವಿಶ್ರವಸನನ್ನೇ ಹೋಲುತ್ತಿರುವುದರಿಂದಲೂ ಇವನು ವೈಶ್ರವಣನೆಂಬ ಹೆಸರಿನಿಂದಲೇ ಪ್ರಸಿದ್ಧನಾಗುತ್ತಾನೆ” ಎಂದು ವಿಶ್ರವಸುವು ಮಗನಿಗೆ ನಾಮಕರಣಮಾಡಿ ತಪಸ್ಸು ಮಾಡಲು ತಪೋವನಕ್ಕೆ ಹೊರಟುಹೋದನು. ಆಹುತಿಯಿಂದ ಹುತಮಾಡಲ್ಪಟ್ಟ ಮಹಾತೇಜಸ್ಸಿನಿಂದ ಕೂಡಿದ ಯಜ್ಞೇಶ್ವರನಂತೆಯೇ ವೈಶ್ರವಣನು ಅಭಿವೃದ್ಧಿ ಹೊಂದುತ್ತಿದ್ದನು.
ಆಶ್ರಮದಲ್ಲಿ ವಾಸಮಾಡುತ್ತಿದ್ದ ವೈಶ್ರವಣನಿಗೆ ಒಮ್ಮೆ ಜ್ಞಾನೋದಯವಾಯಿತು. ‘ಚರಿಷ್ಯೇ ಪರಮಂ ಧರ್ಮಂ ಧರ್ಮೋ ಹಿ ಪರಮಾ ಗತಿಃ’ ‘ನಾನು ಶ್ರೇಷ್ಠವಾದ ಧರ್ಮಾಚರಣೆಯನ್ನು ಮಾಡುತ್ತೇನೆ. ಏಕೆಂದರೆ ಧರ್ಮವೇ ಪರಮಗತಿಯಾಗಿದೆ’ ಎಂದು ತಪಸ್ಸು ಮಾಡಲು ನಿಶ್ಚಯಿಸಿ, ಕಠೋರ ನಿಯಮಗಳಿಗೆ ಬದ್ಧನಾದನು. ಒಂದು ಸಾವಿರ ವರ್ಷಗಳ ಕಾಲ ಅವನು ನೀರನ್ನು ಮಾತ್ರ ಕುಡಿಯುತ್ತಾ, ಮತ್ತೊಂದು ಸಾವಿರ ವರ್ಷಗಳ ಕಾಲ ಗಾಳಿಯನ್ನೇ ಆಹಾರವನ್ನಾಗಿಸಿ ಕೊಳ್ಳುತ್ತಾ, ಯಾವುದೇ ಆಹಾರವನ್ನೂ ತೆಗೆದುಕೊಳ್ಳದೇ ಒಂದು ಸಾವಿರ ವರ್ಷದವರೆಗೆ ತಪಸ್ಸು ಮಾಡಿದನು. ವೈಶ್ರವಣನ ಆ ಘೋರವಾದ ತಪಸ್ಸಿನಿಂದ ಸುಪ್ರೀತನಾದ ಮಹಾತೇಜಸ್ವಿಯಾದ ಬ್ರಹ್ಮನು ಇಂದ್ರನೇ ಮೊದಲಾದ ದೇವತೆಗಳೊಡನೆ ವೈಶ್ರವಣನ ಆಶ್ರಮದ ಬಳಿಗೆ ಬಂದನು.
ಬ್ರಹ್ಮ: “ವತ್ಸ! ನಿನ್ನ ಈ ಪರಮಾದ್ಭುತವಾದ ತಪಃಕರ್ಮದಿಂದ ನಾನು ಸಂತುಷ್ಟನಾಗಿದ್ದೇನೆ. ನೀನು ವರವನ್ನು ಪಡೆದುಕೊಳ್ಳಲು ಯೋಗ್ಯನಾಗಿರುವೆ. ನಿನಗೆ ಮಂಗಳವಾಗಲಿ; ಯಾವ ವರವು ಬೇಕೆಂಬುದನ್ನು ಹೇಳು”.
ವೈಶ್ರವಣ: ’ಪೂಜ್ಯನೇ! ಲೋಕಗಳನ್ನು ರಕ್ಷಣೆ ಮಾಡಲು ಸಾಧ್ಯವಾಗುವ ಲೋಕಪಾಲ ಪದವಿಯನ್ನು ನಾನು ಬಯಸುವೆನು.
ಬ್ರಹ್ಮ: ನಾನು ನಾಲ್ಕನೆಯ ಲೋಕಪಾಲನನ್ನು ಸೃಷ್ಟಿಸಲು ಉದ್ಯುಕ್ತನಾಗಿದ್ದೆನು. ಈಗ ನಿನ್ನ ಅಭಿಲಾಷೆಯಂತೆ ಯಮ-ಇಂದ್ರ ಮತ್ತು ವರುಣರಂತೆ ನೀನೂ ಒಬ್ಬ ಲೋಕಪಾಲನಾಗು. ಧರ್ಮಜ್ಞನೇ! ನೀನು ಒಳ್ಳೆಯ ಮನಸ್ಸಿನಿಂದ ಈ ಪದವಿಯನ್ನು ಪರಿಗ್ರಹಿಸು. ಅದರ ಜೊತೆಗೆ ನೀನು ಸಮಸ್ತವಾದ ನಿಧಿಗಳಿಗೂ ಸ್ವಾಮಿಯಾಗುವೆ. ಸೂರ್ಯಸದೃಶವಾಗಿರುವ ಆ ಪುಷ್ಪಕವಿಮಾನವನ್ನು ಸಂಚಾರಾರ್ಥವಾಗಿ ಪ್ರತಿಗ್ರಹಿಸು. ದೇವತೆಗಳಿಗೆ ಸಮಾನನಾಗು.
ಪಿತಾಮಹನು ಹೀಗೆ ಹೇಳಿ ದೇವತೆಗಳೊಡನೆ ಆಕಾಶಮಾರ್ಗದಲ್ಲಿ ಸ್ವರ್ಗಕ್ಕೆ ಹೊರಟು ಹೋದನು. ನಂತರ ಧನೇಶನು ತಂದೆಗೆ ಕೈಮುಗಿದುಕೊಂಡು ವಿನೀತನಾಗಿ “ಪೂಜ್ಯನೇ! ಪಿತಾಮಹನಿಂದ ನಾನು ಇಷ್ಟವಾದ ವರಗಳನ್ನು ಪಡೆದುಕೊಂಡಿರುವೆನು. ಆದರೆ ಪ್ರಜಾಪತಿದೇವನು ನನಗೆ ವಾಸಕ್ಕಾಗಿ ನಿವಾಸವನ್ನು ಕಲ್ಪಸಿಕೊಡಲಿಲ್ಲ. ನಾನು ವಾಸಮಾಡಲಿರುವ ಆ ಸ್ಥಾನದಲ್ಲಿ ಪ್ರಾಣಿಗಳಿಗೆ ಯಾವ ವಿಧವಾದ ಪೀಡೆಯೂ ಉಂಟಾಗಬಾರದು. ಅಂತಹ ಸ್ಥಾನವೊಂದನ್ನು ನನಗೆ ಕಲ್ಪಿಸಿಕೊಡು” ಎಂದನು.
ಮಗನ ಅಪೇಕ್ಷೆಯಂತೆಯೇ ಮುನಿಶ್ರೇಷ್ಠನಾದ ವಿಶ್ರವಸನು ‘ಧರ್ಮಜ್ಞನೇ! ನಾನು ಹೇಳುವುದನ್ನು ಲಾಲಿಸು. ದಕ್ಷಿಣ ಸಮುದ್ರದ ಆಚೆಯ ದಡದಲ್ಲಿ ತ್ರಿಕೂಟವೆಂಬ ಪರ್ವತವಿದೆ. ಅದರ ಮೇಲ್ಬಾಗದಲ್ಲಿ ವಿಶಾಲವಾಗಿಯೂ ಇಂದ್ರನ ಅಮರಾವತಿಯಂತೆಯೂ ಇರುವ ಸುಂದರವಾದ ಪಟ್ಟಣವಿದೆ. ವಿಶ್ವಕರ್ಮನಿಂದಲೇ ನಿರ್ಮಿಸಲ್ಪಟ್ಟಿರುವ ಆ ಪಟ್ಟಣಕ್ಕೆ “ಲಂಕಾ” ಎಂದು ಹೆಸರು. ಅಮರಾವತಿಯಂತೆಯೇ ಇರುವ ಆ ಲಂಕಾಪಟ್ಟಣವು ರಾಕ್ಷಸರ ವಾಸಕ್ಕಾಗಿ ನಿರ್ಮಿತವಾಗಿದೆ. ಅದು ಯಂತ್ರ-ಶಸ್ತ್ರಗಳಿಂದ ಸಮಾವೃತವಾಗಿದೆ. ಸುವರ್ಣಮಯವಾದ ಪ್ರಾಕಾರದಿಂದ ಕೂಡಿದೆ. ಲಂಕಾಪಟ್ಟಣದ ಸುತ್ತಲೂ ಕಂದಕಗಳಿವೆ. ನಿನಗೆ ಮಂಗಳವಾಗಲಿ. ನೀನು ಆ ಲಂಕಾಪಟ್ಟಣದಲ್ಲಿ ವಾಸವಾಗಿರು. ಅದರ ಹೆಬ್ಬಾಗಿಲು ಸುವರ್ಣದಿಂದಲೂ, ವೈಡೂರ್ಯಮಣಿಗಳಿಂದಲೂ ಮಾಡಲ್ಪಟ್ಟಿದೆ. ಅತ್ಯಂತ ರಮಣೀಯವಾಗಿದೆ. ವಿಷ್ಣುವಿನ ಭಯದಿಂದ ಪೀಡಿತರಾದ ರಾಕ್ಷಸರು ಆ ಲಂಕಾಪಟ್ಟಣವನ್ನು ಬಿಟ್ಟು ಓಡಿಹೋದರು. ಎಲ್ಲ ರಾಕ್ಷಸರೂ ರಸಾತಲಕ್ಕೆ ಓಡಿಹೋದುದರಿಂದ ಆ ಲಂಕಾಪಟ್ಟಣವೀಗ ಶೂನ್ಯವಾಗಿದೆ. ಈ ಕಾರಣದಿಂದಲೇ ಅಲ್ಲಿ ಯಾವ ರಾಜನೂ ಇಲ್ಲ. ಅಲ್ಲಿ ನೀನು ಸುಖವಾಗಿ ವಾಸಮಾಡಿಕೊಂಡಿರಬಹುದು. ಆದುದರಿಂದ ನೀನೀಗಲೇ ಲಂಕಾಪಟ್ಟಣಕ್ಕೆ ಹೋಗು. ಅಲ್ಲಿ ನಿನಗೆ ಯಾವ ವಿಧವಾದ ಬಾಧೆಯೂ ಉಂಟಾಗುವುದಿಲ್ಲ. ನಿನ್ನ ವಾಸವೂ ಅಲ್ಲಿ ದೋಷರಹಿತವಾಗಿರುತ್ತದೆ’ ಎಂದನು.
ತಂದೆಯ ಅಪ್ಪಣೆಯಂತೆಯೇ ವೈಶ್ರವಣನು ತ್ರಿಕೂಟಪರ್ವತದ ಶಿಖರದಲ್ಲಿದ್ದ ಲಂಕಾಪಟ್ಟಣದಲ್ಲಿ ವಾಸಮಾಡತೊಡಗಿದನು. ಅವನಲ್ಲಿ ವಾಸಮಾಡಲು ಪ್ರಾರಂಭಿಸಿದ ಸ್ವಲ್ಪ ದಿವಸಗಳಲ್ಲಿಯೇ ಅವನ ಧರ್ಮಶಾಸನದ ಪ್ರಭಾವದಿಂದಾಗಿ ಸಾವಿರಾರು ರಾಕ್ಷಸರು ಪರಮಹೃಷ್ಟರಾಗಿ ಪುನಃ ಅಲ್ಲಿಗೆ ಬಂದು ನೆಲೆಸಿದರು. ಧರ್ಮಾತ್ಮನಾದ, ರಾಕ್ಷಸಶ್ರೇಷ್ಠನಾದ, ವಿಶ್ರವಸನ ಮಗನಾದ ವೈಶ್ರವಣನು ಪರಮಪ್ರೀತನಾಗಿ ಸಮುದ್ರವೇ ಕಂದಕದ ರೂಪದಲ್ಲಿದ್ದ ಲಂಕಾಪಟ್ಟಣದಲ್ಲಿ ವಾಸಮಾಡುತ್ತಿದ್ದನು. ಕುಬೇರನು ಆಯಾ ಕಾಲಗಳಲ್ಲಿ ಪುಷ್ಪಕವಿಮಾನದಲ್ಲಿ ಕುಳಿತು ತಂದೆ-ತಾಯಿಗಳ ಬಳಿಗೂ ಹೋಗಿಬರುತ್ತಿದ್ದನು. ದೇವ-ಗಂಧರ್ವರೂ ಕುಬೇರನನ್ನು ಸ್ತೋತ್ರಮಾಡುತ್ತಿದ್ದರು. ಅವನ ಭವ್ಯವಾದ ಅರಮನೆಯು ಅಪ್ಸರೆಯರ ನೃತ್ಯದಿಂದ ಸುಶೋಭಿತವಾಗಿದ್ದಿತು.
ಕುಬೇರನು ‘ರಾಕ್ಷಸಶ್ರೇಷ್ಠ’ ಎನ್ನುವಲ್ಲಿ ತುಂಬಾ ಸ್ವಾರಸ್ಯವಿದೆ. ರಾಕ್ಷಸರ ಲಂಕೆಯ ಜೊತೆ ಪುಷ್ಪಕವಿಮಾನವೂ ಅವನ ಕೈಸೇರಿತು. ಶೂನ್ಯವಾಗಿರುವ ಸ್ಥಳಗಳನ್ನು ಯಾರದಾದರೂ, ಯಾರಿಗಾದರೂ, ಯಾವಾಗಾದರೂ ಕೊಡಬಹುದೇ? ಅದು ಸಾಧುವೇ? ‘ನಿನ್ನ ವಾಸವು ದೋಷಪೂರ್ಣವಾಗುವುದಿಲ್ಲ’ ಎಂದು ಒತ್ತಿ ಹೇಳಬೇಕಿತ್ತೇ? ಇದರ ಹಿನ್ನೆಲೆಯಲ್ಲಿ ದೋಷವಿದೆ ಎನ್ನುವ ಧ್ವನಿ ಉಂಟು!