Anant Vaidya

Anant Vaidya

Saturday, May 20, 2017

ಪ್ರಾಚೀನಜ್ಞಾನ

ನಂ-1 ಪತ್ರಿಕೆ ವಿಜಯವಾಣಿಗೆ ಕೃತಜ್ಞತೆ ಸಲ್ಲಿಸಿ.

ಗರುಡ ಹನುಮರ ಹಾರಾಡುವ ಶಕ್ತಿಯ ಹಿನ್ನೆಲೆ ಯೇನು?

ವಿಷ್ಣು ದೇವತೆಗಳಲ್ಲಿಯೇ ಮಹಾಬುದ್ಧಿವಂತ! ಶಾಂತಾಕಾರ. ಪಾಲ್ಗಡಲಲ್ಲಿ ಶೇಷಶಯನಿ. ಪದ್ಮನಾಭ. ಪದ್ಮಾಕ್ಷ. ವಿಶ್ವಾಕಾರ. ಅನಂತತೆಯ ಸಂಕೇತವಾದ ಆಕಾಶವರ್ಣಿ. ಸೌಂದರ್ಯಮಯಿ. ಯೋಗಿಗಳ ಹೃದಯದ ಉದ್ಯಾನದ ಕ್ರೀಡಾರೂಪಿ, ರಸಿಕ. ಲಕ್ಷ್ಮೀಲೋಲ. ಸುದರ್ಷನ ಚಕ್ರ, ಕೌಮೋದಕೀ ಗದೆ, ಪದ್ಮ, ಶಂಖಗಳು ಇವನ ಆಯುಧಗಳು! ಶುಭ್ರವಾದ ಪೀತಾಂಬರ, ಕೊರಳಲ್ಲಿ ತುಳಸಿಹಾರ, ಶ್ರೀವತ್ಸ ಲಾಂಛನ, ತನಗೆ ಬೇಕಾದುದನ್ನೆಲ್ಲ ಪಡೆದು ಕೊಳ್ಳುವ ಚಾಕಚಕ್ಯತೆ, ಭೂಭಾರವನ್ನು ಕಡಿಮೆ ಮಾಡುವ ಹೊಣೆಯನ್ನು ಹೊತ್ತವ. ಹತ್ತು ಅವತಾರಗಳನ್ನು ಎತ್ತಿ ದುಷ್ಟಶಿಕ್ಷಣೆ, ಶಿಷ್ಟಪರಿಪಾಲನೆಯನ್ನು ಮಾಡಿದವ! ವಿಷ್ಣುವು ಸರ್ವವ್ಯಾಪಿ. ಆ ಸರ್ವವ್ಯಾಪಿ ಭಗವಂತನ ಅನಂತ, ಅಮೋಘ, ಅಚಿಂತ್ಯ, ಅನಾದಿ, ಅಗಮ್ಯ, ಅಗಾಧ ಶಕ್ತಿ, ವೈಭವಗಳ ಅಭೂತಪೂರ್ವ ವರ್ಣನೆಯೇ ವಿಷ್ಣು ಪುರಾಣ. ಇದರಲ್ಲಿ ಭಗವಂತ ಹಾಗೂ ಭಕ್ತನ ಅವಿನಾಭಾವ ಸಂಬಂಧ, ಲೋಕಾನುಗ್ರಹಕಾರಕ ಶಕ್ತಿಯ ವಿವರವಿದೆ.
ಇವನೇನಾದರೂ ವಿಮಾನದ ಕುರಿತು ಆಲೋಚಿಸಿದ್ದನೇ?
ಹಕ್ಕಿಯೇ ವಿಮಾನಕ್ಕೆ ಪ್ರೇರಣೆ. ವಿಮಾನವೂ ಹಕ್ಕಿಯನ್ನೇ ಹೋಲುವುದು. ವಿಷ್ಣುವಿನ ವಾಹನವೂ ಪಕ್ಷಿಯೇ! ‘ಗರುಡ ಗಮನ’ ಎಂದೇ ಎಲ್ಲರೂ ಹೇಳುವುದು. ಗರುಡ ಮನೋವೇಗವನ್ನು, ಬುದ್ಧಿವೇಗವನ್ನು, ಬೆಳಕಿನ ವೇಗವನ್ನು, ಶರವೇಗವನ್ನು ಹೊಂದಿರುವುದು. ಭಾರತೀಯ ತತ್ತ್ವಜ್ಞಾನದಲ್ಲಿ ಪ್ರಾಣವನ್ನು ‘ಪ್ರಾಣಪಕ್ಷಿ’ ಎಂದೇ ಗುರುತಿಸುವರು. ಓದುಗ ದೇವರಿಗೆ ಒಂದು ಕಥೆಯನ್ನು ಜ್ಞಾಪಿಸಬಹುದು. ಒಂದು ರಾಕ್ಷಸ ಏಳು ಸಮುದ್ರಗಳ ಆಚೆ ಒಂದು ಗಿಣಿಯಲ್ಲಿ ತನ್ನ ‘ಜೀವಪಕ್ಷಿ’ಯನ್ನು ಇಟ್ಟಿದ್ದ! ರಾಜಕುಮಾರ ಏಳುಸಮುದ್ರವನ್ನು ದಾಟಿ ಆ ಗಿಣಿಯ ಕುತ್ತಿಗೆಯನ್ನು ತಿರುಚಿ ಪ್ರಾಣಹರಣ ಮಾಡಿದ. ಪ್ರಾಣಪಕ್ಷಿಯು ಹಾರಿಹೋದ ಮೇಲೆ ಇರುವುದು ಯಾರಿಗೂ ಬೇಡವಾದ ದೇಹಮಾತ್ರ! ದೇಹದ ಸಂಸ್ಕಾರದ ಅಂಗಗಳಲ್ಲಿ ‘ಗರುಡ + ಪುರಾಣ’ ಓದುವ ಅಭ್ಯಾಸವಿದೆ. ಅಂದರೆ ಪ್ರಾಣಪಕ್ಷಿಯ ಪ್ರಯಾಣ! ಹಲವು ದೇವತೆಗಳ ವಾಹನವು ಪಕ್ಷಿಯೇ ಆಗಿದ್ದರೂ ಗರುಡನಷ್ಟು ಪ್ರಭಾವ ಶಾಲಿಯಲ್ಲ.

ಸರಸ್ವತಿ ಮತ್ತು ಷಣ್ಮಖರ ವಾಹನವಾದ ‘ನವಿಲು ರಾಷ್ರೀಯ ಪಕ್ಷಿ’. ‘ಹಂಸಧ್ಯಾನ’ ಎಂದರೆ ’ಶ್ವಾಸಧ್ಯಾಸ’ ... ಎಂದರೆ ಶ್ವಾಸದ ಮೇಲೆ ಗಮನ. ಹಂಸ ಬ್ರಹ್ಮಜ್ಞಾನದ ಸಂಕೇತ. ಹಂಸ ಧ್ಯಾನವೇ ’ಪರಮಹಂಸ’ತ್ವವನ್ನು ನೀಡುವುದು. ಹಂಸದ ಇನ್ನೊಂದು ಗುಣ, ನೀರನ್ನು ತ್ಯಜಿಸಿ ಹಾಲನ್ನು ಸ್ವೀಕರಿಸುವುದು. ಹಂಸಪಕ್ಷಿ ಶರಣಾಗತಿಯ ಸಂಕೇತ. The swan is a symbol of peace and tranquility. ಶಾಂತಿ ಮತ್ತು ದ್ವಂದ್ವನಿವಾರಣೆ. ನಳ-ದಮಯಂತಿಯರ ಗುಣ ವರ್ಣನೆ… ಹಂಸಸಂದೇಶ. [ವನಪರ್ವ-53] ಸಂ.4

ಪಾರಿವಾಳವು ಬಹಳ ಮಹತ್ವವಾದುದು. ಪಾರಿವಾಳ ಅತ್ಯಂತ ಜಾಣಪಕ್ಷಿ. Doves are symbols of love, Peace or as messanger. ಪಾರಿವಾಳವು ಪ್ರೇಮ, ಶಾಂತಿ ಮತ್ತು ವಾರ್ತಾವಾಹಕದ ಸಂಕೇತ. “ಶಾಂತಿ ಸಂಕೇತ” ಎಂದು ಭಾವಿಸಲಾದ ಪಕ್ಷಿ [ಕನ್ನಡ ರತ್ನಕೋಶ. ಶಿವರಾಮ ಕಾರಂತ]
ಪಾರಿವಾಳದ ಕುರಿತು ಅನೇಕ ಕಥೆಗಳಿವೆ. ಪಾರಿವಾಳವನ್ನು ರಕ್ಷಿಸುವುದಕ್ಕಾಗಿ ಶಿಬಿಯು ತನ್ನ ತೊಡೆಯ ಮಾಂಸವನ್ನು ಕತ್ತರಿಸಿ ಕೊಟ್ಟನು. [ವನಪರ್ವ-131 ಸಂಪುಟ-5] ಪಾರಿವಾಳವನ್ನು ಬೇಹುಗಾರಿಕೆಗೂ ಬಳಸುವರು! ಗುಜರಾತಿನ ಸಲಾಯ ಎಸ್ಸಾರ ಬಂದರಿನಲ್ಲಿ ಕಾಲಿನಲ್ಲಿ ಎಲೊಕ್ಟ್ರೋನಿಕ್ ಚಿಪ್ ಇರುವ, ಅರೇಬಿಕ್ ಭಾಷೆಯಲ್ಲಿ ಸಂದೇಶ ಇರುವ ಪಾರಿವಾಳವು ಕಂಡು ನಾ-ನಾ ಊಹೆಗಳಿಗೆ ಕಾರಣವಾದುದು ನಂ-1 ಪತ್ರಿಕೆ ವಿಜಯವಾಣಿಯು 29-3-2014ರಂದು ವರದಿಮಾಡಿತ್ತು. ಯುನಾಟೆಡ್ ಕಿಂಗ್ಡಮ್ನಲ್ಲಿ 1 ಎಪ್ರಿಲ್ ಒಂದು 1918ರಲ್ಲಿ [98 ವರ್ಷ] ಸ್ಥಾಪಿತವಾದ ರೊಯಲ್ ಎರ್ ಫೋರ್ಸನ ಚಿಹ್ನೆ “ಪಾರಿವಾಳ”

ಆದರೆ ಗರುಡನವೇಗ ಮತ್ತು ಗಮನ ಎಲ್ಲ ಪಕ್ಷಿಗಳಿಂಗಿಂತಲೂ ಪ್ರಧಾನವಾದುದು. ಗರುಡಕ್ಕೆ ಹಾವೇ ಆಹಾರ. ಇಂಧನ! ವಿಷವೇ ಅದರ ಹಾರಾಟದ ಮೂಲ. ಗರುಡನಿಗೆ ರೆಕ್ಕೆ ಇದ್ದರೆ ಶ್ರೀರಾಮನ ಪರಮಭಕ್ತ ಹನುಮಂತನಿಗೆ ರೆಕ್ಕೆಯ ಬದಲು ಬಾಲವಿದೆ. ಇವನ ವಾಯುಸಂಚಾರದ ಚಲನೆಗೆ ಬಾಲವೇ ಕಾರಣ. ಬಾಲವೇ ನಿಯಂತ್ರಕ. ತನ್ನ ಬಾಲದ ಬಲದಿಂದಲೇ ಸೂರ್ಯನನ್ನು ನುಂಗಲು ಹೋದವ. ಸೂರ್ಯಗೋಲದ ಭಯವಿಲ್ಲದೆಯೇ, ಸುಟ್ಟು ಹೋಗದೇ ಇರುವವ. ಶ್ರೀರಾಮ-ಲಕ್ಷ್ಮಣರನ್ನು ಋಷ್ಯಮೂಕಕ್ಕೆ, ರಾಮಸೇತುವನ್ನು ದಾಟಬೇಕಾದರೆ ಹೆಗಲಿನ ಮೇಲೆ ಹೊತ್ತು ಸಾಗಿದವ. ರಾವಣನ ಮುಂದೆ ತನ್ನ ಬಾಲದ ಮೇಲೇ ಕುಳಿತವ. ಹಿಮಾಲಯದಿಂದ ಸಂಜೀವಿನಿ ಬೆಟ್ಟವನ್ನು ಎತ್ತಿಕೊಂಡು ಬಂದವ.

ಹನುಮಂತನ ಚಲನೆಗೆ ಸೂರ್ಯಪ್ರಕಾಶವೇ ಕಾರಣವಾಗಿತ್ತು. ಭಾರತೀಯರು ಈ ಹಿಂದೆಯೇ ಸೋಲಾರ ಪ್ರಕಾಶ, ಸೂರ್ಯಶಕ್ತಿಯನ್ನು ಕಂಡು ಕೊಂಡಿದ್ದರೇ! ಅದಕ್ಕೇ ಯೋಗದಲ್ಲಿ ಸೂರ್ಯನಮಸ್ಕಾರ, ಮಂತ್ರದಲ್ಲಿ ಗಾಯತ್ರಿ ಪ್ರಚಲಿತವಾಯಿತೇ? ಈಗಲೂ ಸೂರ್ಯಶಕ್ತಿಯಿಂದ ವಿಮಾನವನ್ನು ಚಲಾಯಿಸುವ ಸಂಶೋಧನೆ ಶರವೇಗದಿಂದ ನಡೆಯುತ್ತಿದೆ. 3 ಡಿಸೆಂಬರ್ 2009ರಂದು ಪ್ರಥಮ ಪ್ರಯೋಗ ನಡೆಯಿತು. ಈ ವಿಮಾನಗಳು ಐವತ್ತು ಕಿಲೋಮೀಟರ್ ಒಂದು ತಾಸಿಗೆ ಚಲಿಸುವುದು. ಸ್ವಿಜರ್ಲೆಂಡ್ನ ಸ್ವಿಸ್ ಇಂಜನೀಯರ್ ಅಂದ್ರೆಬೋರ್ಸಚೆಬೆರ್ಗ್ [Andr’e Borschberg] ಮನಃಶಾಸ್ತ್ರಜ್ಞ ಬೆರ್ಟೆಂಡ್ ಪಿಕ್ಕಾರ್ಡ [Bertrand Piccard] ಸಹಾಯಕ ಸಂಶೋಧಕರೇ ಇದನ್ನು ಚಲಾಯಿಸುತ್ತಿದ್ದರು.
[ಚಿತ್ರದಲ್ಲಿ ಪೂರ್ಣ ಲೇಖನ ಕೊಡಲು ಸಾಧ್ಯವಾಗದಿರುವುದಕ್ಕಾಗಿ,]

No comments:

Post a Comment

ಹೆಸರಿಗೂ ಪುರಾಣವೇ?

  Kavita Gireesh   "ಹೆಸರಿಗೂ ಪುರಾಣವೇ"        ಪಕ್ಕದ ಮನೆಯಲ್ಲಿ ನಾಮಕರಣ   ನಾಮಕರಣ ಅಂತ ಪಕ್ಕದಮನೆ ನಾರ್ತ್ ಇಂಡಿಯನ್ ಫ್ಯಾಮಿಲಿಯವರು ಬೆ...