ನಂ-1 ಪತ್ರಿಕೆ "ವಿಜಯವಾಣಿಗೆ ಕೃತಜ್ಞತೆ ಸಲ್ಲಿಸಿ,
ಹಾರುವ ತಟ್ಟೆ ಹಿಂದಿತ್ತೇ?
ಕಾಶ್ಯಪ ಮತ್ತು ದಿತಿಯರಿಗೆ ಜನಿಸಿದವನೇ ‘ವಜ್ರಾಂಗ’. ದಿತಿಯ ಮಕ್ಕಳೆಲ್ಲರೂ ವಿಷ್ಣುವಿನಿಂದ ಮತ್ತು ಇಂದ್ರನಿಂದ ಹತರಾದರು. ಇವರು ಅದಿತಿಯ ಮಕ್ಕಳು. ಕಾಶ್ಯಪನ ಕುಟುಂಬವೇ ಜಗದ್ವ್ಯಾಪಿಯಾಗಿ ಹರಡಿತ್ತು. ಆದರೆ ಸಹೋದರರ ಕದನದಿಂದಾಗಿ ಅವನ ಕುಟುಂಬದಲ್ಲಿ ಎಲ್ಲವೂ ಸರಿಯಾಗಿದ್ದಿರಲಿಲ್ಲ. ಒಂದು ತಾಯಿಯ ಮಕ್ಕಳೇ ಸರಿಯಿರುವುದಿಲ್ಲ! ಇನ್ನು ಹದಿಮೂರು ತಾಯಂದಿರ ಮಕ್ಕಳು ಹೇಗೆ ಸರಿಯಿದ್ದಾರು?
ವಜ್ರಾಂಗನು ತಾಯಿ ದಿತಿಯ ಗರ್ಭದಲ್ಲಿರುವ ಶಿಶುವನ್ನು ನಲ್ವತ್ತೊಂಬತ್ತು ಭಾಗಗಳನ್ನಾಗಿ ಕತ್ತರಿಸಿದ. ಈ ಮರುತ್ತುಗಳ ತಮ್ಮನೇ ವಜ್ರಾಂಗ! ಇಂದ್ರ ಮಾಡಿದ ಶಿಶುಹತ್ಯೆಯನ್ನು ತಾಯಿ ದಿತಿಯಿಂದ ಕೇಳಿದ ವಜ್ರಾಂಗನು ಇಂದ್ರನನ್ನು ತಾಯಿಯ ಬಳಿಗೆ ಎಳೆದುಕೊಂಡು ಬಂದ! ಅಷ್ಟರಲ್ಲಿ ಕಶ್ಯಪನು ಮತ್ತು ಬ್ರಹ್ಮನು ಬಂದು ಇಂದ್ರನನ್ನು ಬಿಡಿಸಿದರು. ಬಳಿಕ ಬ್ರಹ್ಮನು ವರಾಂಗಿಯೆಂಬ ತರುಣಿಯನ್ನು ಸೃಷ್ಟಿಸಿ, ವಜ್ರಾಂಗನಿಗೆ ಕೊಟ್ಟು ಮದುವೆ ಮಾಡಿದನು. ವಜ್ರಾಂಗನು ತನ್ನ ರಾಕ್ಷಸತ್ವ ನಿವಾರಣೆಗಾಗಿ ಬ್ರಹ್ಮನ ಕುರಿತು ತಪಸ್ಸು ಮಾಡುತ್ತಿದ್ದ!! ವರಾಂಗಿ ಬ್ರಹ್ಮನ ಮಗಳು! ಆದರೂ ಇಂದ್ರನು ಅವಳನ್ನು ನಾ-ನಾ ಪರಿಯಿಂದ ಪೀಡಿಸಿದ.
ವಜ್ರಾಂಗ ಬಹಿರ್ಮಖನಾಗಿ ನೋಡುವಾಗ ವರಾಂಗಿಯು ಎಲ್ಲಿಯೋ ಒಂದು ಪರ್ವತದ ಗವಿಯಲ್ಲಿ ವಿಕೃತೆಯಾಗಿದ್ದಳು. ಅವಳಿಂದ ಸಮಾಚಾರವನ್ನು ತಿಳಿದು ಮರಳಿ ತಪಸ್ಸನ್ನು ಮಾಡಿ ದೇವತೆಗಳನ್ನು ಸದೆಬಡಿಯುವ ಸಾಮರ್ಥ್ಯವುಳ್ಳ ಮಗನನ್ನು ಪಡೆದ. ಅವನೇ ತಾರಕಾಸುರ! [ಮತ್ಸ್ಯಪುರಾಣ-146]
ತಾರಾಕ್ಷ, ಕಮಲಾಕ್ಷ, ವಿದ್ಯುನ್ಮಾಲಿ ಎಂಬ ಮೂವರು ಮಕ್ಕಳು ತಾರಕಾಸುರನಿಗೆ ಜನಿಸಿದರು. ತಾರಕಾಸುರನು ವಧಿಸಲು ಸ್ಕಂದನು ಕಾರಣೀಭೂತನಾದ. ಆ ಯುದ್ಧವನ್ನು ‘ತಾರಕಾಮಯ’ ಸಂಗ್ರಾಮವೆಂದೇ ಕರೆಯುವರು.
ವ್ಯಾಖ್ಯಾನಕಾರರ ವಿವರಣೆ ಹೀಗೆದೆ : “ತಾರಕಾಮಯಃ ತಾರಕಾಸುರ ಏವ ಆಮಯಃ” “ತಾರಕಾಸುರನೇ ಒಂದು ರೋಗ”. ಆ ರೋಗವನ್ನು ಬುಡಪಾಯದಿಂದ ತೆಗೆದು ಹಾಕಿದವ ‘ಮುರುಗನ್’.
ತಾರಾಕ್ಷ, ಕಮಲಾಕ್ಷ, ವಿದ್ಯುನ್ಮಾಲಿ ಈ ಮೂವರೂ ಬ್ರಹ್ಮನ ಕುರಿತು ಘೋರವಾದ ತಪಸ್ಸನ್ನು ಮಾಡಿದರು. ಇವರ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷವಾದ. ‘ಬೇಕಾದ ವರವನ್ನು ಪಡೆಯಲು’ ಆಜ್ಞಾಪಿಸಿದ. ಇವರು ಅಮರತ್ವವನ್ನು ಕೇಳಿದರು. ‘ಅಮರತ್ವವನ್ನು ನೀಡಲು ಸಾಧ್ಯವಿಲ್ಲ. ಬೇರೆ ಯಾವುದಾದರೂ ವರವನ್ನು ಕೇಳಿ’ ಎಂದು ಬ್ರಹ್ಮನು ಹೇಳಿದನು. ಅವರು “ನಾವು ಮೂವರು ಈ ಲೋಕದಲ್ಲಿ ಮೂರು ಪಟ್ಟಣಗಳನ್ನು ನಿರ್ಮಿಸಿಕೊಂಡು ಅಲ್ಲಿಯೇ ಇದ್ದಕೊಂಡು ನಿನ್ನ ಕೃಪಾಪ್ರಸಾದದಿಂದ ಈ ಪೃಥ್ವಿಯನ್ನು ಸಂಚರಿಸುತ್ತಿರುತ್ತೇವೆ. ಒಂದು ಸಾವಿರ ವರ್ಷಗಳನಂತರ ನಾವು ಮೂವರು ಒಟ್ಟಾಗಿ ಸೇರುತ್ತೇವೆ. ನಮ್ಮ ತ್ರಿಪುರಗಳು ಆ ಸಂದರ್ಭದಲ್ಲಿ ಏಕೀಭಾವವನ್ನು ಹೊಂದುತ್ತವೆ. ಏಕೀಭಾವವನ್ನು ಹೊಂದಿದ ತ್ರಿಪುರಗಳನ್ನು ಆ ಸಮಯದಲ್ಲಿ ಯಾವ ದೇವ ಶ್ರೇಷ್ಠನು ಒಂದೇ ಬಾಣದಿಂದ ಭಗ್ನಗೊಳಿಸುತ್ತಾನೆಯೋ ಅವನೇ ನಮ್ಮ ಮೃತ್ಯುವಾಗುತ್ತಾನೆ. ‘ಹಾಗೆಯೇ ಆಗಲಿ’ ಎಂದು ಬ್ರಹ್ಮ ಹೇಳಿದ.
ಬ್ರಹ್ಮನಿಂದ ತಾವು ಅಪೇಕ್ಷಿಸಿದ ವರವನ್ನು ಪಡೆದು ಸುಪ್ರೀತರಾದರು. ಆ ಅಸುರರು ಪರಸ್ಪರವಾಗಿ ಸಮಾಲೋಚಿಸಿದರು. ತಮಗೆ ಅನುಕೂಲಕರವಾದ ಮೂರು ಪುರಗಳನ್ನು ನಿರ್ಮಿಸುವುದರ ಸಲುವಾಗಿ ದೈತ್ಯ – ದಾನವ ಪೂಜಿತನಾದ, ಮುಪ್ಪಿನಿಂದ ಪೂಜಿತನಾಗಿದ್ದ, ಮಹಾಸುರನಾದ, ದೇವಶಿಲ್ಪಿಯಾದ ವಿಶ್ವಕರ್ಮನಿಗೆ ಸಮಾನನಾದ ಮಯನನ್ನು ಆಮಂತ್ರಸಿದರು. ಧೀಮಂತನಾದ ಮಯನು ತನ್ನ ತಪಃಶ್ಯಕ್ತಿಯಿಂದ ಒಂದು ಚಿನ್ನದ ಪುರವನ್ನು, ಒಂದು ಬೆಳ್ಳಿಯ ಪುರವನ್ನು, ಮತ್ತು ಒಂದು ಕಬ್ಬಿಣದ ಪುರವನ್ನು ನಿರ್ಮಿಸಿಕೊಟ್ಟನು.
ಕಾಂಞ್ಚನಂ ದಿವಿ ತತ್ರಾಸೀದನ್ತರಿಕ್ಷೇ ಚ ರಜತಮ್ |
ಆಯಸಂ ಚಾಭವದ್ಭೌಮಂ ಚಕ್ರಸ್ಥಂ ಪೃಥಿವೀಪತೇ || [ವ್ಯಾ. ಭಾರತ. ಕರ್ಣಪರ್ವ – 33-18]
ಸುವರ್ಣದಿಂದ ನಿರ್ಮಿತವಾಗಿದ್ದ ಪುರವು ಸ್ವರ್ಗಲೋಕದಲ್ಲಿದ್ದಿತು. ಬೆಳ್ಳಿಯಿಂದ ನಿರ್ಮಿತವಾಗಿದ್ದ ಪುರವು ಅಂತರಿಕ್ಷದಲ್ಲಿದ್ದಿತು. ಲೋಹದಿಂದ ನಿರ್ಮಿತವಾಗಿದ್ದ ಪುರವು ಸುತ್ತುತ್ತಿರುವ ಚಕ್ರದ ಮಧ್ಯದಲ್ಲಿ ಭೂಮಿಯಲ್ಲಿದ್ದಿತು.
ಸ್ವರ್ಗಲೋಕದಲ್ಲಿರುವ ಸುವರ್ಣಮಯವಾದ ವಿಚಿತ್ರವಾದ ಪಟ್ಟಣವು ಮಹಾತ್ಮನಾದ ತಾರಾಕ್ಷನದಾಗಿತ್ತು. ಬೆಳ್ಳಿಯ ಪಟ್ಟಣವು ಕಮಲಾಕ್ಷನಿಗೆ ಸೇರಿತ್ತು. ಭೂಮಿಯಲ್ಲಿದ್ದ ಲೋಹದ ಪುರವು ವಿದ್ಯನ್ಮಾಲಿಗೆ ಸೇರಿತ್ತು! ತಮ್ಮ ಪಟ್ಟಣದ ಪ್ರಭಾವ ಹಾಗೂ ವಿವಿಧ ಶಸ್ತ್ರಾಸ್ತ್ರಗಳಿಂದ ದರ್ಪಿಷ್ಠರಾಗಿ ಮೂರು ಲೋಕಗಳಲ್ಲಿಯೂ ತಮ್ಮ ಆಧಿಪತ್ಯವನ್ನು ಸ್ಥಾಪಿಸಿದರಲ್ಲದೇ ತಮಗೆ ವರವನ್ನು ನೀಡಿದ ಬ್ರಹ್ಮನನ್ನೇ “ಆ ಪ್ರಜಾಪತಿ ಎಂಬವನು ಯಾರು?” ಎಂದೆನ್ನುತ್ತಾ ತಾತ್ಸಾರದಿಂದ ಕಾಣತೊಡಗಿದರು.
ತ್ರಿಪುರಗಳಲ್ಲಿ ಆಶ್ರಯಪಡೆದಿದ್ದ ದೈತ್ಯರು ಯಾವ-ಯಾವುದು ಬೇಕೆಂದು ಆಸೆಪಡುತ್ತಿದ್ದರೋ ಆ ಎಲ್ಲ ಕಾಮನಾವಸ್ತುಗಳನ್ನು ಮಯಾಸುರನು ತಕ್ಷಣ ಸಿದ್ಧಮಾಡಿಕೊಡುತ್ತಿದ್ದನು.
ಗಮನಿಸಿ: ವಿಶ್ವಕರ್ಮನಿರ್ಮಿತ ಸುವರ್ಣಪುರ, ಬೆಳ್ಳಿಯಪುರ, ಕಬ್ಬಿಣದಪುರ ಹಾರುತಟ್ಟೆಯೇ? ಇವು ಎಲ್ಲಿಂದ ಎಲ್ಲಿಗೆ ಬೇಕಾದರೂ ಚಲಿಸುತ್ತಿದ್ದವೇ? ಒಂದು ಸ್ವರ್ಗಲೋಕದಲ್ಲಿ, ಇನ್ನೊಂದು ಅಂತರಿಕ್ಷದಲ್ಲಿ, ಮತ್ತೊಂದು ಭೂಲೋಕದಲ್ಲಿ ‘ಸುತ್ತುತ್ತಿರುವ ಚಕ್ರದ ಮಧ್ಯದಲ್ಲಿ ಭೂಮಿಯಲ್ಲಿದ್ದಿತ್ತೇ! ಚಕ್ರ ಚಲನ ಶೀಲತೆಯ ಸಂಕೇತ. ಅದೇ ಈ ಪಟ್ಟಣಗಳಲ್ಲಿಯೂ ಕಂಡುಬರುವುದು. ಒಂದು ಸಾವಿರ ವರ್ಷಕ್ಕೊಮ್ಮೆ ಒಂದೇ ಸರಳರೇಷೆಯಲ್ಲಿ ಇದ್ದು ಏಕೀ ಭಾವವನ್ನು ಹೊಂದುತ್ತದೆ. ಆಗ ಇದನ್ನು ಶಕ್ತಿಶಾಲಿಯೊಬ್ಬ ನಾಶ ಪಡಿಸಬಲ್ಲ! ಗುರುತ್ವಾಕರ್ಷಣೆಯ ಸಿದ್ಧಾಂತ ಇಲ್ಲಿ ಎದ್ದು ಕಾಣುವುದು. ವಿನಾಶದ ಸೂತ್ರವೂ ಸ್ಪಷ್ಟವಾಗಿಯೇ ಇದೆ.
ಕಾಶ್ಯಪನಿಗೆ ಏಕೆ ತನ್ನ ಮಕ್ಕಳಲ್ಲಿಯೇ ಬೇಧ? ಅವನೇಕೆ ದಿತಿಯ ಮಕ್ಕಳನ್ನು ರಕ್ಷಿಸಲು ಹೋದ? ನಾ-ನಾ ಪ್ರಶ್ನರಗಳು ನಮ್ಮನ್ನು ಕಾಡುವುದು.
ಹಾರುವ ತಟ್ಟೆ ಹಿಂದಿತ್ತೇ?
ಕಾಶ್ಯಪ ಮತ್ತು ದಿತಿಯರಿಗೆ ಜನಿಸಿದವನೇ ‘ವಜ್ರಾಂಗ’. ದಿತಿಯ ಮಕ್ಕಳೆಲ್ಲರೂ ವಿಷ್ಣುವಿನಿಂದ ಮತ್ತು ಇಂದ್ರನಿಂದ ಹತರಾದರು. ಇವರು ಅದಿತಿಯ ಮಕ್ಕಳು. ಕಾಶ್ಯಪನ ಕುಟುಂಬವೇ ಜಗದ್ವ್ಯಾಪಿಯಾಗಿ ಹರಡಿತ್ತು. ಆದರೆ ಸಹೋದರರ ಕದನದಿಂದಾಗಿ ಅವನ ಕುಟುಂಬದಲ್ಲಿ ಎಲ್ಲವೂ ಸರಿಯಾಗಿದ್ದಿರಲಿಲ್ಲ. ಒಂದು ತಾಯಿಯ ಮಕ್ಕಳೇ ಸರಿಯಿರುವುದಿಲ್ಲ! ಇನ್ನು ಹದಿಮೂರು ತಾಯಂದಿರ ಮಕ್ಕಳು ಹೇಗೆ ಸರಿಯಿದ್ದಾರು?
ವಜ್ರಾಂಗನು ತಾಯಿ ದಿತಿಯ ಗರ್ಭದಲ್ಲಿರುವ ಶಿಶುವನ್ನು ನಲ್ವತ್ತೊಂಬತ್ತು ಭಾಗಗಳನ್ನಾಗಿ ಕತ್ತರಿಸಿದ. ಈ ಮರುತ್ತುಗಳ ತಮ್ಮನೇ ವಜ್ರಾಂಗ! ಇಂದ್ರ ಮಾಡಿದ ಶಿಶುಹತ್ಯೆಯನ್ನು ತಾಯಿ ದಿತಿಯಿಂದ ಕೇಳಿದ ವಜ್ರಾಂಗನು ಇಂದ್ರನನ್ನು ತಾಯಿಯ ಬಳಿಗೆ ಎಳೆದುಕೊಂಡು ಬಂದ! ಅಷ್ಟರಲ್ಲಿ ಕಶ್ಯಪನು ಮತ್ತು ಬ್ರಹ್ಮನು ಬಂದು ಇಂದ್ರನನ್ನು ಬಿಡಿಸಿದರು. ಬಳಿಕ ಬ್ರಹ್ಮನು ವರಾಂಗಿಯೆಂಬ ತರುಣಿಯನ್ನು ಸೃಷ್ಟಿಸಿ, ವಜ್ರಾಂಗನಿಗೆ ಕೊಟ್ಟು ಮದುವೆ ಮಾಡಿದನು. ವಜ್ರಾಂಗನು ತನ್ನ ರಾಕ್ಷಸತ್ವ ನಿವಾರಣೆಗಾಗಿ ಬ್ರಹ್ಮನ ಕುರಿತು ತಪಸ್ಸು ಮಾಡುತ್ತಿದ್ದ!! ವರಾಂಗಿ ಬ್ರಹ್ಮನ ಮಗಳು! ಆದರೂ ಇಂದ್ರನು ಅವಳನ್ನು ನಾ-ನಾ ಪರಿಯಿಂದ ಪೀಡಿಸಿದ.
ವಜ್ರಾಂಗ ಬಹಿರ್ಮಖನಾಗಿ ನೋಡುವಾಗ ವರಾಂಗಿಯು ಎಲ್ಲಿಯೋ ಒಂದು ಪರ್ವತದ ಗವಿಯಲ್ಲಿ ವಿಕೃತೆಯಾಗಿದ್ದಳು. ಅವಳಿಂದ ಸಮಾಚಾರವನ್ನು ತಿಳಿದು ಮರಳಿ ತಪಸ್ಸನ್ನು ಮಾಡಿ ದೇವತೆಗಳನ್ನು ಸದೆಬಡಿಯುವ ಸಾಮರ್ಥ್ಯವುಳ್ಳ ಮಗನನ್ನು ಪಡೆದ. ಅವನೇ ತಾರಕಾಸುರ! [ಮತ್ಸ್ಯಪುರಾಣ-146]
ತಾರಾಕ್ಷ, ಕಮಲಾಕ್ಷ, ವಿದ್ಯುನ್ಮಾಲಿ ಎಂಬ ಮೂವರು ಮಕ್ಕಳು ತಾರಕಾಸುರನಿಗೆ ಜನಿಸಿದರು. ತಾರಕಾಸುರನು ವಧಿಸಲು ಸ್ಕಂದನು ಕಾರಣೀಭೂತನಾದ. ಆ ಯುದ್ಧವನ್ನು ‘ತಾರಕಾಮಯ’ ಸಂಗ್ರಾಮವೆಂದೇ ಕರೆಯುವರು.
ವ್ಯಾಖ್ಯಾನಕಾರರ ವಿವರಣೆ ಹೀಗೆದೆ : “ತಾರಕಾಮಯಃ ತಾರಕಾಸುರ ಏವ ಆಮಯಃ” “ತಾರಕಾಸುರನೇ ಒಂದು ರೋಗ”. ಆ ರೋಗವನ್ನು ಬುಡಪಾಯದಿಂದ ತೆಗೆದು ಹಾಕಿದವ ‘ಮುರುಗನ್’.
ತಾರಾಕ್ಷ, ಕಮಲಾಕ್ಷ, ವಿದ್ಯುನ್ಮಾಲಿ ಈ ಮೂವರೂ ಬ್ರಹ್ಮನ ಕುರಿತು ಘೋರವಾದ ತಪಸ್ಸನ್ನು ಮಾಡಿದರು. ಇವರ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷವಾದ. ‘ಬೇಕಾದ ವರವನ್ನು ಪಡೆಯಲು’ ಆಜ್ಞಾಪಿಸಿದ. ಇವರು ಅಮರತ್ವವನ್ನು ಕೇಳಿದರು. ‘ಅಮರತ್ವವನ್ನು ನೀಡಲು ಸಾಧ್ಯವಿಲ್ಲ. ಬೇರೆ ಯಾವುದಾದರೂ ವರವನ್ನು ಕೇಳಿ’ ಎಂದು ಬ್ರಹ್ಮನು ಹೇಳಿದನು. ಅವರು “ನಾವು ಮೂವರು ಈ ಲೋಕದಲ್ಲಿ ಮೂರು ಪಟ್ಟಣಗಳನ್ನು ನಿರ್ಮಿಸಿಕೊಂಡು ಅಲ್ಲಿಯೇ ಇದ್ದಕೊಂಡು ನಿನ್ನ ಕೃಪಾಪ್ರಸಾದದಿಂದ ಈ ಪೃಥ್ವಿಯನ್ನು ಸಂಚರಿಸುತ್ತಿರುತ್ತೇವೆ. ಒಂದು ಸಾವಿರ ವರ್ಷಗಳನಂತರ ನಾವು ಮೂವರು ಒಟ್ಟಾಗಿ ಸೇರುತ್ತೇವೆ. ನಮ್ಮ ತ್ರಿಪುರಗಳು ಆ ಸಂದರ್ಭದಲ್ಲಿ ಏಕೀಭಾವವನ್ನು ಹೊಂದುತ್ತವೆ. ಏಕೀಭಾವವನ್ನು ಹೊಂದಿದ ತ್ರಿಪುರಗಳನ್ನು ಆ ಸಮಯದಲ್ಲಿ ಯಾವ ದೇವ ಶ್ರೇಷ್ಠನು ಒಂದೇ ಬಾಣದಿಂದ ಭಗ್ನಗೊಳಿಸುತ್ತಾನೆಯೋ ಅವನೇ ನಮ್ಮ ಮೃತ್ಯುವಾಗುತ್ತಾನೆ. ‘ಹಾಗೆಯೇ ಆಗಲಿ’ ಎಂದು ಬ್ರಹ್ಮ ಹೇಳಿದ.
ಬ್ರಹ್ಮನಿಂದ ತಾವು ಅಪೇಕ್ಷಿಸಿದ ವರವನ್ನು ಪಡೆದು ಸುಪ್ರೀತರಾದರು. ಆ ಅಸುರರು ಪರಸ್ಪರವಾಗಿ ಸಮಾಲೋಚಿಸಿದರು. ತಮಗೆ ಅನುಕೂಲಕರವಾದ ಮೂರು ಪುರಗಳನ್ನು ನಿರ್ಮಿಸುವುದರ ಸಲುವಾಗಿ ದೈತ್ಯ – ದಾನವ ಪೂಜಿತನಾದ, ಮುಪ್ಪಿನಿಂದ ಪೂಜಿತನಾಗಿದ್ದ, ಮಹಾಸುರನಾದ, ದೇವಶಿಲ್ಪಿಯಾದ ವಿಶ್ವಕರ್ಮನಿಗೆ ಸಮಾನನಾದ ಮಯನನ್ನು ಆಮಂತ್ರಸಿದರು. ಧೀಮಂತನಾದ ಮಯನು ತನ್ನ ತಪಃಶ್ಯಕ್ತಿಯಿಂದ ಒಂದು ಚಿನ್ನದ ಪುರವನ್ನು, ಒಂದು ಬೆಳ್ಳಿಯ ಪುರವನ್ನು, ಮತ್ತು ಒಂದು ಕಬ್ಬಿಣದ ಪುರವನ್ನು ನಿರ್ಮಿಸಿಕೊಟ್ಟನು.
ಕಾಂಞ್ಚನಂ ದಿವಿ ತತ್ರಾಸೀದನ್ತರಿಕ್ಷೇ ಚ ರಜತಮ್ |
ಆಯಸಂ ಚಾಭವದ್ಭೌಮಂ ಚಕ್ರಸ್ಥಂ ಪೃಥಿವೀಪತೇ || [ವ್ಯಾ. ಭಾರತ. ಕರ್ಣಪರ್ವ – 33-18]
ಸುವರ್ಣದಿಂದ ನಿರ್ಮಿತವಾಗಿದ್ದ ಪುರವು ಸ್ವರ್ಗಲೋಕದಲ್ಲಿದ್ದಿತು. ಬೆಳ್ಳಿಯಿಂದ ನಿರ್ಮಿತವಾಗಿದ್ದ ಪುರವು ಅಂತರಿಕ್ಷದಲ್ಲಿದ್ದಿತು. ಲೋಹದಿಂದ ನಿರ್ಮಿತವಾಗಿದ್ದ ಪುರವು ಸುತ್ತುತ್ತಿರುವ ಚಕ್ರದ ಮಧ್ಯದಲ್ಲಿ ಭೂಮಿಯಲ್ಲಿದ್ದಿತು.
ಸ್ವರ್ಗಲೋಕದಲ್ಲಿರುವ ಸುವರ್ಣಮಯವಾದ ವಿಚಿತ್ರವಾದ ಪಟ್ಟಣವು ಮಹಾತ್ಮನಾದ ತಾರಾಕ್ಷನದಾಗಿತ್ತು. ಬೆಳ್ಳಿಯ ಪಟ್ಟಣವು ಕಮಲಾಕ್ಷನಿಗೆ ಸೇರಿತ್ತು. ಭೂಮಿಯಲ್ಲಿದ್ದ ಲೋಹದ ಪುರವು ವಿದ್ಯನ್ಮಾಲಿಗೆ ಸೇರಿತ್ತು! ತಮ್ಮ ಪಟ್ಟಣದ ಪ್ರಭಾವ ಹಾಗೂ ವಿವಿಧ ಶಸ್ತ್ರಾಸ್ತ್ರಗಳಿಂದ ದರ್ಪಿಷ್ಠರಾಗಿ ಮೂರು ಲೋಕಗಳಲ್ಲಿಯೂ ತಮ್ಮ ಆಧಿಪತ್ಯವನ್ನು ಸ್ಥಾಪಿಸಿದರಲ್ಲದೇ ತಮಗೆ ವರವನ್ನು ನೀಡಿದ ಬ್ರಹ್ಮನನ್ನೇ “ಆ ಪ್ರಜಾಪತಿ ಎಂಬವನು ಯಾರು?” ಎಂದೆನ್ನುತ್ತಾ ತಾತ್ಸಾರದಿಂದ ಕಾಣತೊಡಗಿದರು.
ತ್ರಿಪುರಗಳಲ್ಲಿ ಆಶ್ರಯಪಡೆದಿದ್ದ ದೈತ್ಯರು ಯಾವ-ಯಾವುದು ಬೇಕೆಂದು ಆಸೆಪಡುತ್ತಿದ್ದರೋ ಆ ಎಲ್ಲ ಕಾಮನಾವಸ್ತುಗಳನ್ನು ಮಯಾಸುರನು ತಕ್ಷಣ ಸಿದ್ಧಮಾಡಿಕೊಡುತ್ತಿದ್ದನು.
ಗಮನಿಸಿ: ವಿಶ್ವಕರ್ಮನಿರ್ಮಿತ ಸುವರ್ಣಪುರ, ಬೆಳ್ಳಿಯಪುರ, ಕಬ್ಬಿಣದಪುರ ಹಾರುತಟ್ಟೆಯೇ? ಇವು ಎಲ್ಲಿಂದ ಎಲ್ಲಿಗೆ ಬೇಕಾದರೂ ಚಲಿಸುತ್ತಿದ್ದವೇ? ಒಂದು ಸ್ವರ್ಗಲೋಕದಲ್ಲಿ, ಇನ್ನೊಂದು ಅಂತರಿಕ್ಷದಲ್ಲಿ, ಮತ್ತೊಂದು ಭೂಲೋಕದಲ್ಲಿ ‘ಸುತ್ತುತ್ತಿರುವ ಚಕ್ರದ ಮಧ್ಯದಲ್ಲಿ ಭೂಮಿಯಲ್ಲಿದ್ದಿತ್ತೇ! ಚಕ್ರ ಚಲನ ಶೀಲತೆಯ ಸಂಕೇತ. ಅದೇ ಈ ಪಟ್ಟಣಗಳಲ್ಲಿಯೂ ಕಂಡುಬರುವುದು. ಒಂದು ಸಾವಿರ ವರ್ಷಕ್ಕೊಮ್ಮೆ ಒಂದೇ ಸರಳರೇಷೆಯಲ್ಲಿ ಇದ್ದು ಏಕೀ ಭಾವವನ್ನು ಹೊಂದುತ್ತದೆ. ಆಗ ಇದನ್ನು ಶಕ್ತಿಶಾಲಿಯೊಬ್ಬ ನಾಶ ಪಡಿಸಬಲ್ಲ! ಗುರುತ್ವಾಕರ್ಷಣೆಯ ಸಿದ್ಧಾಂತ ಇಲ್ಲಿ ಎದ್ದು ಕಾಣುವುದು. ವಿನಾಶದ ಸೂತ್ರವೂ ಸ್ಪಷ್ಟವಾಗಿಯೇ ಇದೆ.
ಕಾಶ್ಯಪನಿಗೆ ಏಕೆ ತನ್ನ ಮಕ್ಕಳಲ್ಲಿಯೇ ಬೇಧ? ಅವನೇಕೆ ದಿತಿಯ ಮಕ್ಕಳನ್ನು ರಕ್ಷಿಸಲು ಹೋದ? ನಾ-ನಾ ಪ್ರಶ್ನರಗಳು ನಮ್ಮನ್ನು ಕಾಡುವುದು.
No comments:
Post a Comment